ರೈತರಿಗೆ ಖುಷಿ ಆಗುವ ಸುದ್ದಿ ಮಳೆ ಬಗ್ಗೆ ಹವಾಮಾನ ಇಲಾಖೆ ಹೇಳಿದ್ದೇನು.?
05:03 PM Feb 12, 2024 IST | Bcsuddi
Advertisement
ಬೆಂಗಳೂರು: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಮಳೆ ಆಶಾದಾಯಕವಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೊ ದುರ್ಬಲಗೊಳ್ಳುವುದರಿಂದ ಆಗಸ್ಟ್ ವೇಳೆಗೆ ಲಾ ನಿನಾ ರೂಪುಗೊಂಡು ಭಾರಿ ಮಳೆಯನ್ನು ತರುತ್ತದೆ.
Advertisement
ಕಳೆದ ವರ್ಷ ಎಲ್ ನಿನೋದಿಂದಾಗಿ ಮಳೆ ಕಡಿಮೆಯಾಗಿತ್ತು. ಆದರೆ, ಈ ಬಾರಿ ನೈರುತ್ಯ ಹಂಗಾಮಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹೇಳಿದೆ. ಆದರೆ, ಬೇಸಿಗೆಯಲ್ಲಿ ಬಿಸಿಲಿನ ತೀವ್ರತೆಯೂ ಹೆಚ್ಚು ಇರಲಿದೆ ಎಂದು ಅದು ಹೇಳಿದೆ.