For the best experience, open
https://m.bcsuddi.com
on your mobile browser.
Advertisement

ಈ ಕಾರಣಕ್ಕೆ ಚಿತ್ರದುರ್ಗ ನಗರಸಭೆಯ ನಾಲ್ವರು ಬಿಜೆಪಿ ಸದಸ್ಯರ ಉಚ್ಛಾಟನೆ.!

08:15 AM Sep 17, 2024 IST | BC Suddi
ಈ ಕಾರಣಕ್ಕೆ ಚಿತ್ರದುರ್ಗ ನಗರಸಭೆಯ ನಾಲ್ವರು ಬಿಜೆಪಿ ಸದಸ್ಯರ ಉಚ್ಛಾಟನೆ
Advertisement

ಚಿತ್ರದುರ್ಗ: ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ ನಾಲ್ವರು ಸದಸ್ಯರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳವರೆಗೆ ಉಚ್ಛಾಟನೆ- ಗೊಳಿಸಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಸೋಮವಾರ ಆದೇಶಿಸಿದ್ದಾರೆ.

ಬಿಜೆಪಿ ಬೆಂಬಲಿತರಾಗಿ ಆಯ್ಕೆಯಾಗಿದ್ದ 1ನೇ ವಾರ್ಡ್ ಸದಸ್ಯೆ ನಾಗಮ್ಮ 17ನೇ ವಾರ್ಡ್ ಸದಸ್ಯ ಜಯಪ್ಪ, 30ನೇ ವಾರ್ಡ್ ಸದಸ್ಯ ಮಂಜಣ್ಣ ಹಾಗೂ 33ನೇ ವಾರ್ಡ್ ಸದಸ್ಯೆ ಶ್ರೀದೇವಿ ಚಕ್ರವರ್ತಿ ಅವರು ಉಚ್ಛಾಟನೆ- ಗೊಂಡವರು.

Advertisement

ಪಕ್ಷದ ಶಿಸ್ತು ಉಲ್ಲಂಘನೆ ಮಾಡಿರುವ ಸದಸ್ಯರು ಮುಖಂಡರಿಗೆ ಮುಜುಗರ ಉಂಟುಮಾಡಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಉಚ್ಛಾಟನೆ ಮಾಡಲಾಗಿದೆ' ಎಂದು ಎ. ಮುರಳಿ ತಿಳಿಸಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Author Image

Advertisement