For the best experience, open
https://m.bcsuddi.com
on your mobile browser.
Advertisement

ಬದುಕಿಗೊಂದು ಸ್ಫೂರ್ತಿ 'ರತನ್‌ ಟಾಟಾ' ನೀಡಿರುವ ಟಾಪ್‌ 10 ಮಾತುಗಳಿವು..!

10:42 AM Oct 10, 2024 IST | BC Suddi
ಬದುಕಿಗೊಂದು ಸ್ಫೂರ್ತಿ  ರತನ್‌ ಟಾಟಾ  ನೀಡಿರುವ ಟಾಪ್‌ 10 ಮಾತುಗಳಿವು
Advertisement

ಮುಂಬೈ: ದೇಶ ಕಂಡ ಮಹಾನ್ ಉದ್ಯಮಿ ರತನ್ ಟಾಟಾ ನಮ್ಮನ್ನಗಲಿದ್ದಾರೆ. ಈ ಸುದ್ದಿ ಕೇಳಿ ಭಾರತೀಯರು ಬೆಚ್ಚಿ ಬಿದ್ದಿದ್ದಾರೆ. ಸಾಮಾನ್ಯರು ಮಾತ್ರವಲ್ಲದೇ ರಾಜಕಾರಣಿಗಳು, ಉದ್ಯಮಿಗಳು ಕಣ್ಣೀರಿಟ್ಟಿದ್ದಾರೆ. ಅಪ್ಪಟ ದೇಶಭಕ್ತ ರತನ್ ಟಾಟಾ ಮುಂದಿನ ಪೀಳಿಗೆಗೆ ಯುವಕರಿಗೆ ಸ್ಫೂರ್ತಿಯ ದಾರಿದೀಪವಾಗಿ ನಿಂತ ವ್ಯಕ್ತಿ. ರತನ್‌ ಟಾಟಾ ಹೇಳಿರುವ 10 ಪ್ರಮುಖ ಮಾತುಗಳು ಇಲ್ಲಿವೆ ನೋಡಿ: * ಕಬ್ಬಿಣವನ್ನು ಯಾರೂ ಕೂಡ ನಾಶ ಮಾಡಲು ಸಾಧ್ಯವಿಲ್ಲ. ಆದರೆ, ಅದರಲ್ಲೇ ಹುಟ್ಟುವ ತುಕ್ಕು ಕಬ್ಬಿಣವನ್ನು ನಾಶ ಮಾಡುತ್ತದೆ. ಅದೇ ರೀತಿ ಯಾರೂ ಒಬ್ಬ ವ್ಯಕ್ತಿಯನ್ನು ನಾಶಮಾಡಲು ಸಾಧ್ಯವಿಲ್ಲ. ಆದರೆ ಅವರ ಸ್ವಂತ ಮನಸ್ಥಿತಿ ಅವರನ್ನು ನಾಶ ಮಾಡಬಹುದು. * ಜನರು ನಿಮ್ಮ ಮೇಲೆ ಎಸೆಯುವ ಕಲ್ಲುಗಳನ್ನು ವಿನಮ್ರವಾಗಿ ತೆಗೆದುಕೊಳ್ಳಿ, ಮತ್ತು ಅದೇ ಕಲ್ಲಿನಿಂದ ನಿಮ್ಮ ಇಚ್ಛೆಯ ಸ್ಮಾರಕವನ್ನು ನಿರ್ಮಿಸಿ. * ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನಂತರ ಅವುಗಳನ್ನು ಸರಿಯಾಗಿ ಮಾಡುತ್ತೇನೆ. * 'ಯಾವ ದಿನ ನನಗೆ ಹಾರಲು ಸಾಧ್ಯವಾಗೋದಿಲ್ಲವೋ, ಆ ದಿನ ನನಗೆ ದುಃಖದ ದಿನವಾಗಿರುತ್ತದೆ...' ವಿಮಾನ ಪ್ರಯಾಣದ ಕುರಿತಾಗಿ ರತನ್‌ ಟಾಟಾ ಹೇಳಿದ ಮಾತು. * ಯಾವುದೇ ಅಪಾಯವನ್ನು ತೆಗೆದುಕೊಳ್ಳದಿರುವುದು ದೊಡ್ಡ ಅಪಾಯ. ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಸೋಲು ಕಾಣುವ ಏಕೈಕ ಮಾರ್ಗ ಎಂದರೆ ಅಪಾಯಗಳನ್ನು ತೆಗೆದುಕೊಳ್ಳದಿರುವುದು. * 'ಬದುಕಿನ ಕೊನೆಯಲ್ಲಿ, ನಾವು ತೆಗೆದುಕೊಳ್ಳದ ಅವಕಾಶಗಳಿಗೆ ಮಾತ್ರ ನಾವು ವಿಷಾದಪಡುತ್ತೇವೆ..' ಸಂದರ್ಶನವೊಂದರಲ್ಲಿ ಬದುಕಿನ ಬಗ್ಗೆ ಹೇಳಿದ ಮಾತು. * ಜೀವನದಲ್ಲಿ ಏರಿಳಿತಗಳು ನಮ್ಮನ್ನು ಮುಂದುವರಿಸಲು ಬಹಳ ಮುಖ್ಯ ಏಕೆಂದರೆ ಇಸಿಜಿಯಲ್ಲಿಯೂ ಸಹ ಸರಳ ರೇಖೆಯು ನಾವು ಜೀವಂತವಾಗಿಲ್ಲ ಎಂದೇ ತೋರಿಸುತ್ತದೆ. * ನಾನು ಯಾವಾಗಲೂ ಭಾರತದ ಭವಿಷ್ಯದ ಬಗ್ಗೆ ತುಂಬಾ ಆತ್ಮವಿಶ್ವಾಸ ಮತ್ತು ಲವಲವಿಕೆಯಿಂದ ಇದ್ದೇನೆ. ದೇಶದ ಶಕ್ತಿ ನನಗೆ ಗೊತ್ತು.. * ನಾನು ಕೆಲಸ-ಜೀವನದ ಸಮತೋಲನವನ್ನು ನಂಬುವುದಿಲ್ಲ. ನಾನು ಕೆಲಸ-ಜೀವನದ ಏಕೀಕರಣವನ್ನು ನಂಬುತ್ತೇನೆ. ನಿಮ್ಮ ಕೆಲಸ ಮತ್ತು ಜೀವನವನ್ನು ಅರ್ಥಪೂರ್ಣ ಮತ್ತು ಪೂರೈಸುವಂತೆ ಮಾಡಿ ಮತ್ತು ಅವು ಪರಸ್ಪರ ಪೂರಕವಾಗಿರುತ್ತವೆ. * ಸಮಗ್ರತೆ, ಬದ್ಧತೆ ಇರುವ ವ್ಯಕ್ತಿಯಾಗಿ ಬದುಕಿ. ಜೀವನದಲ್ಲಿ ಯಾವಾಗಲೂ ಸರಿಯಾದದ್ದನ್ನು ಮಾಡಲು ಪ್ರಯತ್ನ ಮಾಡಿ ಅದು ಕಷ್ಟವಾಗಿದ್ದರೂ ಸಹ.

Author Image

Advertisement