For the best experience, open
https://m.bcsuddi.com
on your mobile browser.
Advertisement

'ಉತ್ತಮ ಕೆಲಸವನ್ನು ಸಹಿಸದ ಬಿಜೆಪಿ, ನನ್ನನ್ನು ಜೈಲಿಗೆ ಕಳುಹಿಸಿತು' - ಕೇಜ್ರಿವಾಲ್‌

05:57 PM Oct 16, 2024 IST | BC Suddi
 ಉತ್ತಮ ಕೆಲಸವನ್ನು ಸಹಿಸದ ಬಿಜೆಪಿ  ನನ್ನನ್ನು ಜೈಲಿಗೆ ಕಳುಹಿಸಿತು    ಕೇಜ್ರಿವಾಲ್‌
Advertisement

ನವದೆಹಲಿ : ನಾನು ಭ್ರಷ್ಟನಲ್ಲ, ದೆಹಲಿ ಜನರಿಗಾಗಿ ಎಎಪಿ ಸರ್ಕಾರ ಮಾಡುತ್ತಿದ್ದ ಉತ್ತಮ ಕೆಲಸವನ್ನು ಸಹಿಸದ ಬಿಜೆಪಿ, ನನ್ನನ್ನು ಜೈಲಿಗೆ ಕಳುಹಿಸಿತು ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಬುಧವಾರ ಆರೋಪಿಸಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ 'ಜನ ಸಂಪರ್ಕ ' ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ಪ್ರಕರಣಗಳಲ್ಲಿ ನಾಯಕರ ಬಂಧನದ ಹಿಂದಿನ ಸತ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಅಭಿಯಾನ ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ.

ಎಎಪಿ ಕಾರ್ಯ ಕರ್ತರು ಈ ಅಭಿಯಾನದ ಪತ್ರಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಮೂಲಕ ಜನರಿಗೆ ಸತ್ಯವನ್ನು ತಿಳಿಸಲು ಬಯಸುತ್ತೇವೆ. ದೆಹಲಿ ಜನರಿಗೆ ಉತ್ತಮ ಸೌಲಭ್ಯಗಳು ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ಕಂಡು ಕೇಂದ್ರ ಬಿಜೆಪಿ ಸರ್ಕಾರ ಷಡ್ಯಂತ್ರ ರೂಪಿಸಿ ನನ್ನನ್ನು ಐದು ತಿಂಗಳು ಜೈಲಿಗೆ ಕಳುಹಿಸಿತು ಎಂದು ವಾಗ್ದಾಳಿ ನಡೆಸಿದ್ದಾರೆ.

Advertisement

Author Image

Advertisement