ಜೋದರ ಮಾಯಣ್ಣ ಅವರ ವಚನ.
07:56 AM Jan 26, 2024 IST | Bcsuddi
Advertisement
ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
Advertisement
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.
ವಚನ: :
ಮುನ್ನ ಪರಸತಿ ಪಾರ್ವತಿಯೆಂದು
ನಡೆಸಿತ್ತು ನುಡಿಸಿತ್ತು ಗುರುವಚನ.
ಬಳಿಕ ಎನ್ನ ಶರಣಸತಿಯೆಂದು
ನಡೆಸಿತ್ತು ನುಡಿಸಿತ್ತು ಗುರುವಚನ.
ಇನ್ನು ಸತಿಯರೆಲ್ಲಾ ಗುರುಸತಿಯರೆಂದು
ನಡೆಸಿತ್ತು ನುಡಿಸಿತ್ತು ಗುರುವಚನ.
ನಡೆದುದು ತಪ್ಪದೆ ನುಡಿದುದು ಹುಸಿಯದೆ
ನಡೆಸಿತ್ತು ನುಡಿಸಿತ್ತು ಗುರುವಚನ.
ಅಚ್ಚಿಗವಿಲ್ಲದೆ ಮಚ್ಚಿದ ಮನವನು
ನಿಶ್ಚಿಂತ ಮಾಡಿತ್ತು ಗುರುವಚನ.
ಶಂಭು ಸೋಮನಾಥಲಿಂಗಸಂಗ ಸುಸಂಗವ ಮಾಡಿತ್ತು ಗುರುವಚನ.
-ಜೋದರ ಮಾಯಣ್ಣ