HDಕುಮಾರಸ್ವಾಮಿ ಬಗ್ಗೆ ಸಿಎಂ ಏನಂತ ಟ್ವೀಟ್ ಮಾಡಿದ್ರು.?
07:20 AM Nov 17, 2023 IST | Bcsuddi
Advertisement
ಬೆಂಗಳೂರು: ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದರೂ ಜನಸೇವೆಯಿಂದ ಹಿಂದೆ ಸರಿಯದ ಯತೀಂದ್ರ, ವರುಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.
ನೈತಿಕವಾಗಿ ಕುಗ್ಗಿಸುವ ದುರುದ್ದೇಶದಿಂದ HD ಕುಮಾರಸ್ವಾಮಿ, ನಿತ್ಯ ಯತೀಂದ್ರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ತಮ್ಮ ಪತ್ನಿ ಹಾಗೂ ಮಗ ಕೂಡಾ ರಾಜಕೀಯದಲ್ಲಿದ್ದಾರೆ ಎನ್ನುವುದನ್ನು HDK ಮರೆತಂತಿದೆ. ನಾನು ಕುಮಾರಸ್ವಾಮಿಯವರ ಮಟ್ಟಕ್ಕೆ ಇಳಿದು ಮಾತನಾಡಲಾರೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
Advertisement