ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

Exclusive : ಇಮ್ರಾನ್ ಪಾಷನಿಂದ ನನಗೆ ಜೀವ ಭಯ ಇದೆ ಆಲ್ತಾಫ್ ಖಾನ್ : ಸಿಸಿಬಿ ಮೆಟ್ಟಿಲೇರಿದ ದಶಕದ ದ್ವೇಷ ರಾಜಕೀಯ

10:14 AM Aug 13, 2024 IST | BC Suddi
Advertisement

ಬೆಂಗಳೂರು : ಪಾದರಾಯನಪುರ, ಜೆಜೆಆರ್ ನಗರ ಅಂದ್ರೆ ನೆನಪಾಗೋದೇ ಇಬ್ಬರ ಹೆಸ್ರು ಒಂದು ಆಲ್ತಾಫ್‌ಖಾನ್ ಮತ್ತೊಂದು ಇಮ್ರಾನ್ ಪಾಷ. ಎರಡು ಕುಟುಂಬಗಳ ನಡುವೆ ಎರಡು‌ ದಶಕಗಳ ವೈರತ್ವ ಇದೆ.

Advertisement

ಸದ್ಯ ಈ ವೈರತ್ವ ಮುಂದುವರಿದಿದ್ದು. ಅಲ್ತಾಫ್ ಖಾನ್ ಇಮ್ರಾನ್ ಪಾಷ ನಿಂದ ನನಗೆ ಜೀವ ಭಯ ಇದೆ ಅಂತ ಸಿಸಿಬಿಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆ ಇಮ್ರಾನ್ ಪಾಷ ಕರೆಸಿ ವಿಚಾರಣೆ ನಡೆಸಿತ್ತಿದ್ದಾರೆ.

ಅಲ್ತಾಪ್ ಸಹೋದರರನ್ನ ಇದೇ ಇಮ್ರಾನ್ ಪಾಷ್ ಅಂಡ್ ಬ್ರದರ್ಸ್ ರಾಜಕೀಯ ಭಾಷಣಣ ವೇದಿಕೆ ಮೇಲೆ ನುಗ್ಗಿ ಜೊಡಿ ಕೊಲೆ ಮಾಡಿದ ಆರೋಪವಿದೆ. ಸದ್ಯ ಇಮ್ರಾನ್ ಜೆಡಿಎಸ್ ಪಕ್ಷದಲ್ಲಿದ್ದು, ಅಲ್ತಾಫ್ ಕಾಂಗ್ರೆಸ್ ‌ನಲ್ಲಿದ್ದಾರೆ.

ಪ್ರಸ್ತುತ ರಾಜಕೀಯ ಬೆಳವಣಿಗೆ ಹಿನ್ನೆಲೆ ಇಮ್ರಾನ್ ಪಾಷ ಕಾಂಗ್ರೆಸ್ ಸೇರ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಇದೇ ಕಾರಣಕ್ಕೆ ಅಲ್ತಾಫ್ ಈ ರೀತಿ ಆರೋಪ ಮಾಡಿ ಕಾಂಗ್ರೆಸ್ ಪಕ್ಷದಿಂದ ಇಮ್ರಾನ್ ನ ದೂರ ಇಡೋ ಪ್ರಯತ್ನ ಮಾಡ್ತಿದ್ದಾರೆ ಎನ್ನಲಾಗ್ತಿದೆ.

ಇಲ್ಲ ಇಮ್ರಾನ್ ಪಾಷ ನಿಜವಾಗಿಯೂ ಅಲ್ತಾಫ್ ಪಾಷ ಮುಗಿಸಲು ಪ್ಲಾನ್ ಮಾಡಿದ್ರಾ ಎನ್ನುವುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.

Advertisement
Next Article