For the best experience, open
https://m.bcsuddi.com
on your mobile browser.
Advertisement

Breaking news: ನಾನೇನು ಮಾಡಿಲ್ಲ, ನಂಗೆ ಏನು ಗೊತ್ತಿಲ್ಲ, ನನ್ನ ಬಿಟ್ಟು ಬಿಡಿ - ವಕೀಲರ ಮುಂದೆ ದರ್ಶನ್ ಅಳಲು

05:59 PM Jun 11, 2024 IST | Bcsuddi
breaking news  ನಾನೇನು ಮಾಡಿಲ್ಲ  ನಂಗೆ ಏನು ಗೊತ್ತಿಲ್ಲ  ನನ್ನ ಬಿಟ್ಟು ಬಿಡಿ   ವಕೀಲರ ಮುಂದೆ ದರ್ಶನ್ ಅಳಲು
Advertisement

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಅವರ ಆಪ್ತೆ ಪವಿತ್ರಾಗೌಡ ಸೇರಿದಂತೆ 13 ಆರೋಪಿಗಳನ್ನು ಬಂಧಿಸಲಾಗಿದೆ.

ಇದೇ ವಿಚಾರವಾಗಿ ತಮ್ಮ ವಕೀಲ ಅನಿಲ್ ಜೊತೆಗೆ ಮಾತನಾಡಿರುವ ನಟ ದರ್ಶನ್, ನಾನೇನು ಮಾಡಿಲ್ಲ, ನಂಗೆ ಏನು ಗೊತ್ತಿಲ್ಲ, ನನ್ನ ಬಿಟ್ಟು ಬಿಡಿ ಎಂದು ಅಳಲು ತೋಡಿಕೊಂಡಿದ್ದಾರೆ.

ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಅವರ ಕೊ ಬ್ರದರ್ ಶುಶಾಂತ್ ತೆರಳಿದ್ದರು. ಈ ವೇಳೆ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನಿಶ್ ಜೊತೆ ಮಾತನಾಡಿದ್ದಾರೆ.

Advertisement

'ನಾನೇನು ಮಾಡಿಲ್ಲ' ಅಂತ ಹೆಂಡ್ತಿ ವಿಜಯಲಕ್ಷ್ಮಿ ಅವರಿಗೆ ನಟ ದರ್ಶನ್ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Author Image

Advertisement