80ಕ್ಕೂ ಹೆಚ್ಚು ಕಾಡಾನೆಗಳು ಕಂಡು ಸ್ಥಳೀಯರಲ್ಲಿ ಆತಂಕ.!
08:19 AM Dec 11, 2023 IST | Bcsuddi
Advertisement
ಆನೇಕಲ್: ತಮಿಳುನಾಡು ಹೊಸೂರಿನ ಶಾನಮಾನು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡೊಂದು ಎರಡು ದಿನಗಳಿಂದ ಬೀಡುಬಿಟ್ಟಿದೆ. ಈ ಹಿಂಡಿನಲ್ಲಿ 80ಕ್ಕೂ ಹೆಚ್ಚು ಕಾಡಾನೆಗಳಿದ್ದು, ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.
ಶಾನಮಾವು, ಬೂದುರು, ಹಳಿಯಾಳ, ರಾಮಾಪುರ, ಬಿರ್ಜೆಪೆಲ್ಲಿ ಸೇರಿದಂತೆ ವಿವಿಧ ಗ್ರಾಮಗಳ ಕೃಷಿ ಜಮೀನುಗಳಿಗೆ ನುಗ್ಗಿದ ಆನೆಗಳು ರಾಗಿ, ಭತ್ತ ಮತ್ತು ತೋಟದ ಬೆಳೆ ತುಳಿದು ಹಾಕಿವೆ.
Advertisement
ತಮಿಳುನಾಡಿನಿಂದ 25 ಆನೆಗಳ ಹಿಂಡೊಂದು ಆನೇಕಲ್ ಭಾಗದತ್ತ ಬರುತ್ತಿದ್ದು, ಇವನ್ನು ಗಡಿಯಲ್ಲಿ ತಡೆಯಲು ಮುತ್ಯಾಮಡುವು ಸಮೀಪದ ಆನೆ ಮಾರ್ಗದ ಬಳಿ ಅರಣ್ಯ ಇಲಾಖೆ ಸಿಬ್ಬಂದಿಯು ಪಟಾಕಿ ಮತ್ತು ಬೆಂಕಿ ಹಾಕಿಕೊಂಡು ಕಾಡಿನತ್ತ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.