For the best experience, open
https://m.bcsuddi.com
on your mobile browser.
Advertisement

13 ಎಕ್ರೆ ಜಮೀನಿಗಾಗಿ ತಮ್ಮದೇ ಕಾರು ಚಾಲಕನಿಗೆ ಕಿರುಕುಳ ನೀಡಿದ್ರಾ ಭವಾನಿ ರೇವಣ್ಣ?

02:44 PM Dec 21, 2023 IST | Bcsuddi
13 ಎಕ್ರೆ ಜಮೀನಿಗಾಗಿ ತಮ್ಮದೇ ಕಾರು ಚಾಲಕನಿಗೆ ಕಿರುಕುಳ ನೀಡಿದ್ರಾ ಭವಾನಿ ರೇವಣ್ಣ
Advertisement

ಬೆಂಗಳೂರು: 13 ಎಕರೆ ಜಮೀನಿಗಾಗಿ ತಮ್ಮದೇ ಕಾರು ಚಾಲಕನಿಗೆ ಕಿರುಕುಳ ನೀಡಿದ ಗಂಭೀರ ಆರೋಪವೊಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ‌ ಪತ್ನಿ ಭವಾನಿ ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಳಿಬಂದಿದೆ.

14 ವರ್ಷಗಳ ಕಾಲ ಪ್ರಜ್ವಲ್‌ ರೇವಣ್ಣ ಅವರೊಂದಿಗೆ ಕಾರು ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದ ಕಾರ್ತಿಕ್ ಎಂಬುವವರಿಗೆ ಸೇರಿದ 13 ಎಕರೆ ಭೂಮಿಯನ್ನು ರೇವಣ್ಣ ಕುಟುಂಬ ಕಿತ್ತುಕೊಂಡಿದೆ. ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ‌ ಪತ್ನಿ ಭವಾನಿ ಆಸ್ತಿ ಮಾರಾಟ ಮಾಡುವಂತೆ ಒತ್ತಾಯಿಸಿ ಚಾಲಕ ಕಾರ್ತಿಕ್ ಅವರನ್ನು ಕಿಡ್ನಾಪ್ ಮಾಡುವುದರೊಂದಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ನ್ಯಾಯ ಒದಗಿಸಿಕೊಡುವಂತೆ ದಕ್ಷಿಣ ವಲಯ ಐಜಿಪಿಗೆ ಚಾಲಕ ದೂರು ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಸ್ಪಂದನೆ ನೀಡದಂತೆ ರೇವಣ್ಣ ಕುಟುಂಬ ಒತ್ತಡ ಹೇರುತ್ತಿದೆ ಎನ್ನಲಾಗಿದೆ.

ಹೊಳೆನರಸೀಪುರ ತಾಲೂಕಿನಲ್ಲಿರುವ 13 ಎಕರೆ ಭೂಮಿಯನ್ನು ಅವರಿಗೆ ಮಾರಾಟ ಮಾಡುವಂತೆ ಒತ್ತಾಯಿಸಿ ನನ್ನನ್ನು ಹಾಗೂ ನನ್ನ ಪತ್ನಿಯನ್ನು 2023 ರ ಮಾ.12 ರಂದು ಕಿಡ್ನಾಪ್ ಮಾಡಿ, ಚಿತ್ರಹಿಂಸೆ ಕೊಟ್ಟಿದ್ದಾರೆ. ಬಳಿಕ ಭೂಮಿಯನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

ಈ ಬಗ್ಗೆ ಏಪ್ರಿಲ್ ತಿಂಗಳಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಸಹಿತ ಇನ್ನಿತರ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಜರುಗಿಸದ ಹಿನ್ನೆಲೆ ಚಾಲಕ ಕಾರ್ತಿಕ್ ಮಾಧ್ಯಮದ ಮುಂದೆ ಅಳಲುತೋಡಿಕೊಂಡಿದ್ದಾರೆ.

Author Image

Advertisement