For the best experience, open
https://m.bcsuddi.com
on your mobile browser.
Advertisement

10 ಸಾವಿರ ಕೊಡಿ ಕಾಪಾಡುತ್ತೇವೆ.! - ಸರ್ಕಾರಿ ಅಧಿಕಾರಿ ಮುಳುಗಿ ಸಾಯುತ್ತಿದ್ದರೂ ನೋಡುತ್ತಾ ನಿಂತ ಮುಳುಗುತಜ್ಞರು

06:28 PM Sep 02, 2024 IST | BC Suddi
10 ಸಾವಿರ ಕೊಡಿ ಕಾಪಾಡುತ್ತೇವೆ     ಸರ್ಕಾರಿ ಅಧಿಕಾರಿ ಮುಳುಗಿ ಸಾಯುತ್ತಿದ್ದರೂ ನೋಡುತ್ತಾ ನಿಂತ ಮುಳುಗುತಜ್ಞರು
Advertisement

ಲಕ್ನೋ: ಅಧಿಕಾರಿಯೊಬ್ಬರು ನೀರಿನಲ್ಲಿ ಮುಳುಗುತ್ತಿದ್ದರೂ ರಕ್ಷಣೆಗೆ ಧಾವಿಸದೇ ಸ್ಥಳೀಯ ಮುಳುಗುತಜ್ಞರು 10 ಸಾವಿರ ರೂಪಾಯಿಗೆ ಡಿಮ್ಯಾಂಡ್‌ ಮಾಡುತ್ತಾ ನಿಂತಿದ್ದ ಅಮಾನುಷ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಾನ್ಪುರ ನಗರದ ನಾನಾಮೌ ಗಂಗಾ ಘಾಟ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಅಧಿಕಾರಿಯನ್ನು ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಗೌರವ್ ಗೌರವ್ ಎಂದು ಗುರುತಿಸಲಾಗಿದೆ. ಗೌರವ್ ಶನಿವಾರ ಮೂವರು ಸಹಚರರೊಂದಿಗೆ ಗಂಗಾ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಅವರು ನೀರಿನಲ್ಲಿ ಮುಳುಗಿದ್ದಾರೆ. ತಕ್ಷಣವೇ ಅವರನ್ನು ರಕ್ಷಿಸುವಂತೆ ಸ್ಥಳೀಯ ಡೈವರ್‌ಗಳಿಗೆ ಮನವಿ ಮಾಡಿದ್ದಾರೆ.

ಆದರೆ ಹತ್ತು ಸಾವಿರ ಹಣ ನೀಡುವಂತೆ ಡೈವರ್‌ಗಳು ಡಿಮ್ಯಾಂಡ್ ಮಾಡಿದ್ದಾರೆ. ಹಣ ವರ್ಗಾವಣೆ ಆಗುವಾಗ ವಿಳಂಬವಾಗಿದೆ. ಅತ್ತ ಅಧಿಕಾರಿ ನೀರಿನಲ್ಲಿ ಮುಳುಗುತ್ತಿದ್ದರೂ ಡೈವರ್‌ಗಳು ರಕ್ಷಣೆಗೆ ಮುಂದಾಗಿಲ್ಲ. ಪರಿಣಾಮವಾಗಿ ಗೌರವ್ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಸದ್ಯ ಎನ್‌ಡಿಆರ್‌ಎಫ್ ತಂಡವು ಗೌರವ್ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದೆ. ಗೌರವ್ ಅವರ ಸಹೋದರ ಬಿಹಾರ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದು, ಅವರ ಪತ್ನಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

.ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Author Image

Advertisement