ಹೊತ್ತಿ ಉರಿದ ಬಸ್..ಭಾರೀ ಅನಾಹುತ ಬಟ್ ಜಸ್ಟ್ ಮಿಸ್!
10:27 AM Dec 15, 2023 IST | Bcsuddi
Advertisement
ವಿಜಯಪುರ: ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಖಾಸಗಿ ಬನ್ನೊಂದು ರಸ್ತೆ ಮಧ್ಯೆಯೇ ಹೊತ್ತಿ ಉರಿದಿದೆ.
ಎಲ್ಲ ಪ್ರಯಾಣಿಕರು ಬಸ್ನಿಂದ ತಕ್ಷಣ ಇಳಿದಿದ್ದರಿಂದ ಸಂಭಾವ್ಯ ಭಾರೀ ಅನಾಹುತವೊಂದು ತಪ್ಪಿದೆ. ಘಟನೆಯಿಂದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ.
ಜನತಾ ಟ್ರಾವೆಲ್ಸ್ಗೆ ಸೇರಿದ ಬಸ್ ವಿಜಯಪುರ ತಾಲೂಕಿನ ಹಿಟ್ಟನಹಳ್ಳಿ ಸಮೀಪ ಸಂಚರಿಸುತ್ತಿದ್ದಾಗ ಏಕಾಏಕಿ ಟೈರ್ ಬ್ಲಾಸ್ಟ್ ಆಗಿದೆ. ತಕ್ಷಣ ಚಾಲಕ ಬಸ್ ಅನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸಿದ್ದಾನೆ. ಎಲ್ಲಾ ಲಗೇಜ್ ಬೆಂಕಿಗಾಹುತಿಯಾಗಿದೆ.
Advertisement