For the best experience, open
https://m.bcsuddi.com
on your mobile browser.
Advertisement

'ಹೆಚ್‌ಡಿಕೆಗೆ ಮಾತನಾಡಲು ವಿಷಯವಿಲ್ಲದೆ ಹುಚ್ಚು ಹಿಡಿದವರ ಹಾಗೇ ಒದರಾಡುತ್ತಿದ್ದಾರೆ'- ಬೋಸರಾಜು

12:35 PM Oct 04, 2024 IST | BC Suddi
 ಹೆಚ್‌ಡಿಕೆಗೆ ಮಾತನಾಡಲು ವಿಷಯವಿಲ್ಲದೆ ಹುಚ್ಚು ಹಿಡಿದವರ ಹಾಗೇ ಒದರಾಡುತ್ತಿದ್ದಾರೆ   ಬೋಸರಾಜು
Advertisement

ರಾಯಚೂರು : ಹೆಚ್‌ಡಿ.ಕುಮಾರಸ್ವಾಮಿಗೆ ಮಾತನಾಡಲು ವಿಷಯವಿಲ್ಲ. ಅದಕ್ಕೆ ಹುಚ್ಚು ಹಿಡಿದವರ ಹಾಗೇ ಒದರಾಡುತ್ತಿದ್ದಾರೆ ಎಮದು ಸಚಿವ ಎನ್.ಎಸ್.ಬೋಸರಾಜು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ವಿಚಾರದಲ್ಲಿ ಮನನೊಂದು ಆತ್ಮಸಾಕ್ಷಿಯಾಗಿ ನಡೆದುಕೊಳ್ಳುತ್ತೇನೆ ಎಂದು ಪಾರ್ವತಿ ಸಿದ್ದರಾಮಯ್ಯ 14 ಸೈಟ್‌ಗಳನ್ನ ಮರಳಿಸಿದ್ದಾರೆ. ಹೆಚ್‌ಡಿಕೆಗೆ ಮಾತನಾಡಲು ವಿಷಯವಿಲ್ಲದೆ ಪೂರ್ತಿ ಹುಚ್ಚು ಹಿಡಿದಿದೆ. ಸುಮ್ಮನೆ ಒದರುತ್ತಿದ್ದಾರೆ ಎಂದರು.

ಮುಡಾ ಪ್ರಕರಣದಲ್ಲಿ ನನ್ನ ಪತಿ ಹೆಸರಿಗೆ ಮಸಿ ಬಳಿಯುವಂತಹ ಕೆಲಸ ಮಾಡುತ್ತಿದ್ದಾರೆ. ನನ್ನ ಹೆಸರಿನಲ್ಲಿರುವ 14 ಸೈಟ್‌ಗಳನ್ನ ವಾಪಸ್ ಕೊಡುತ್ತೇನೆ ಎಂದು ಪಾರ್ವತಿ ಸಿದ್ದರಾಮಯ್ಯ ಹೇಳಿದ್ದಾರೆ. ಮನನೊಂದು ಆತ್ಮಸಾಕ್ಷಿಯಾಗಿ ನಡೆದುಕೊಳ್ಳುತ್ತೇನೆ ಎಂದು ಸೈಟ್ ಸರೆಂಡರ್ ಮಾಡಿದ್ದಾರೆ. ಇದಕ್ಕೆ ಹೇಗೆ ಸರೆಂಡರ್ ಮಾಡಿದರೂ ಎಂದು ಕುಮಾರಸ್ವಾಮಿ ಕೇಳ್ತಾರೆ. ಅಶೋಕನನ್ನು ಕೇಳಿದರೆ ನಾನು ಆವಾಗಲೇ ಜಾಗವನ್ನು ಮರಳಿಸಿದ್ದೇನೆ ಎನ್ನುತ್ತಾರೆ. ಅವರು ವಿರೋಧ ಪಕ್ಷದ ನಾಯಕರು ಇವರು ಕೇಂದ್ರ ಸಚಿವರು. ಇವರಿಗೆ ಯಾವ ರೀತಿಯ ಬದ್ಧತೆಯಿದೆ. ಜವಾಬ್ದಾರಿಯಿದೆ. ಇವರ ಮಾತುಗಳಿಗೆ ಅರ್ಥವಿದೆಯಾ? ಎಂದು ಪ್ರಶ್ನಿಸಿದರು.

Advertisement

ಕುಮಾರಸ್ವಾಮಿ ಮೇಲೆ 50 ಕೋಟಿ ರೂ. ಲಂಚ ಆರೋಪದಲ್ಲಿ ಎಫ್‌ಐಆರ್ ಆಗಿದೆ. ವಿಥ್ ರೆಕಾರ್ಡ್ ಕೇಸ್ ಆಗಿದೆ. ಅಶೋಕ್ ಅವರ ಮೇಲೆ ಎಫ್‌ಐಆರ್ ಆಗಿದೆ. ಯಡಿಯೂರಪ್ಪ ಮೇಲೆ ನೂರಾರು ಕೇಸ್ ಇವೆ. ಇದಕ್ಕೆಲ್ಲಾ ಏನು ಉತ್ತರ ಕೊಡುತ್ತಾರೆ? ಅವರದೇ ಪಕ್ಷದಲ್ಲಿರುವವರು ಭ್ರಷ್ಟಾಚಾರ ಮಾಡಿ ಸಾವಿರ ಕೋಟಿ ಇಟ್ಟುಕೊಂಡಿದ್ದಾರೆ ಎಂದು ಅವರ ಪಕ್ಷದ ಯತ್ನಾಳ್ ತಿಳಿಸಿದ್ದಾರೆ. ಈ ಸರ್ಕಾರ ತೆಗೆದು ಸಿಎಂ ಆಗಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆಲ್ಲಾ ಕುಮಾರಸ್ವಾಮಿ, ಯಡಿಯೂರಪ್ಪ, ಅಶೋಕ್, ವಿಜಯೇಂದ್ರ ಉತ್ತರ ನೀಡಬೇಕಲ್ಲ. ಅಮಿತ್ ಶಾ, ಮೋದಿ ಸಹ ಏನೂ ಮಾತನಾಡುತ್ತಿಲ್ಲ. ಕೇಶವ ಕೃಪಾಕ್ಕೆ ಕರೆದು ಆರ್‌ಎಸ್‌ಎಸ್‌ನವರಿಗೆ ಸರಿ ಮಾಡಲು ಕಳುಹಿಸಿದ್ದಾರೆ ಇದು ಬಹಿರಂಗವಾದ ವಿಷಯ ಎಂದು ಕಿಡಿಕಾರಿದರು.

Author Image

Advertisement