ಹುಲಿ ಉಗುರು ಸಹಿತ ವನ್ಯಜೀವಿಗಳ ಅಂಗಾಂಗದ ವಸ್ತುಗಳು ಇದ್ದಲ್ಲಿ ಸರ್ಕಾರಕ್ಕೆ ನೀಡಲು ಕೊನೆ ಅವಕಾಶ : ಈಶ್ವರ ಬಿ ಖಂಡ್ರೆ
10:26 AM Dec 20, 2023 IST | Bcsuddi
Advertisement
ಬೆಂಗಳೂರು: ಹುಲಿ ಉಗುರು ಸಹಿತ ವನ್ಯಜೀವಿಗಳ ಅಂಗಾಂಗದ ವಸ್ತುಗಳನ್ನು ಇಟ್ಟುಕೊಂಡಿದ್ದಲ್ಲಿ ಸರ್ಕಾರಕ್ಕೆ ನೀಡಲು ಅವಕಾಶ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.
ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ಹುಲಿ ಉಗುರು ಸಹಿತ ಇತರ ವನ್ಯಜೀವಿಗಳ ಅಂಗಾಂಗದ ವಸ್ತುಗಳನ್ನು ಇಟ್ಟುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಸರ್ಕಾರಕ್ಕೆ ಮರುಕಳಿಸಲು ಅವಕಾಶ ನೀಡಲಾಗಿದೆ ಎಂದರು.
ಕೇರಳ ಸರ್ಕಾರ ಕೈಗೊಂಡ ನಿರ್ಧಾರ ಮತ್ತು ನಮ್ಮ ಸರ್ಕಾರದ ಉದ್ದೇಶಿತ ನಿರ್ಧಾರ ವಿಭಿನ್ನವಾಗಿದ್ದು ಈ ಬಗ್ಗೆ ಇಲಾಖೆಯೊಂದಿಗೆ ಚರ್ಚಿಸಿ ಕಡತವನ್ನು ಮರುಮಂಡಿಸಲು ಸೂಚನೆ ನೀಡಲಾಗಿದೆ ಎಂದರು.
Advertisement