ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹುರುಳಿಕಾಳಿನ ಆರೋಗ್ಯ ಪ್ರಯೋಜನ

09:12 AM Aug 27, 2024 IST | BC Suddi
Advertisement

ಸಾಮಾನ್ಯವಾಗಿ ತೊಗರಿಬೇಳೆ, ಹೆಸರುಬೇಳು, ಹೆಸರುಕಾಳು, ಹೀಗೆ ವಿವಿಧ ರೀತಿಯ ಬೇಳೆ ಕಾಳುಗಳನ್ನು ನಾವು ದಿನನಿತ್ಯ ಬಳಸುತ್ತೇವೆ. ಇದರಿಂದ ಸಾಕಷ್ಟು ಪೋಷಕಾಂಶ ಕೂಡ ಸಿಗುತ್ತದೆ. ಆದರೆ ಹುರುಳಿಕಾಳುಗಳ ಬಗ್ಗೆ ಗೊತ್ತಿದೆಯಾ?. ದಕ್ಷಿಣಭಾರತದಲ್ಲಿ ಹೆಚ್ಚಾಗಿ ಬೆಳೆಯುವ ಆಹಾರ ಬೆಳೆಗಳಲ್ಲಿ ಹುರುಳಿ ಕೂಡ ಒಂದು. ಸಾಮಾನ್ಯವಾಗಿ ಹಸು ಸೇರಿದಂತೆ ಪ್ರಾಣಿಗಳ ಆಹಾರವಾಗಿ ಹೆಚ್ಚಾಗಿ ಬಳಸುವ ಹುರುಳಿ ಮಾನವನ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಹುರುಳಿ ಕಾಳುಗಳನ್ನು ವಿವಿಧ ರೀತಿಯಲ್ಲಿ ಸೇವಿಸಬಹುದು.

Advertisement

ಪುಡಿ ರೂಪದಲ್ಲಿ, ಸೂಪ್, ಮೊಳಕೆ ಭರಿಸುವ ಮೂಲಕ ಸಲಾಡ್, ಬೆಳಗಿನ ಉಪಾಹಾರಕ್ಕಾಗಿ ಬೇಯಿಸಿದ ಹುರುಳಿ ಕಾಳು, ಹೀಗೆ ವಿಭಿನ್ನ ಆಹಾರಗಳನ್ನು ತಯಾರಿಸಿ ಸೇವಿಸಬಹುದು. ಆಯರ್ವೇದದಲ್ಲಿಯೂ ಹುರುಳಿ ಕಾಳು ಸಾಕಷ್ಟು ಮದ್ದುಗಳ ರೂಪದಲ್ಲಿ ಬಳಕೆಯಾಗುತ್ತದೆ. ಹುರುಳಿ ಕಾಳುಗಳು ಪ್ರೋಟೀನ್‌ ಮತ್ತು ಫೈಬರ್‌ ಅಂಶಗಳಿಂದ ಸಮೃದ್ಧವಾಗಿದೆ. ಇದು ತೂಕ ನಷ್ಟಕ್ಕೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಲ್ಲದೆ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಎಲ್‌ಡಿಎಲ್‌ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಎಚ್‌ಡಿಎಲ್‌ ಎನ್ನುವ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.

ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಈ ಹುರುಳಿಕಾಳುಗಳ ಪುಡಿಯನ್ನು ನೀರಿಗೆ ಹಾಕಿ ಅದಕ್ಕೆ ಅರ್ಧ ಚಮಚ ಜೀರಿಗೆಯನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಹುರುಳಿ ಕಾಳು ಉಪಯುಕ್ತವಾಗಿದೆ.

ದೇಹದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಇದರಿಂದ ಮಧುಮೇಹಿಗಳಿಗೆ ಹುರುಳಿಕಾಳು ಉತ್ತಮ ಆಹಾರವಾಗಿದೆ. ಹುರುಳಿಕಾಳುಗಳನ್ನು ನೀರಿನಲ್ಲಿ ನೆನೆಸಿ ಮೊಳಕೆಭರಿಸಿ ಕೂಡ ಸೇವನೆ ಮಾಡಬಹುದು ಅಥವಾ ಇತರ ಆಹಾರಗಳೊಂದಿಗೆ ಸೇರಿಸಿ ಸಲಾಡ್‌ ರೂಪದಲ್ಲಿಯೂ ತಿನ್ನಬಹುದು. ಚರ್ಮದ ಮೇಲಿನ ದದ್ದುಗಳು ಮತ್ತು ಇತರ ಚರ್ಮದ ಅಸ್ವಸ್ಥತೆಗಳನ್ನು ಕಡಿಮೆ ಮಾಡಲು ಹುರುಳಿಕಾಳುಗಳು ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಚರ್ಮವನ್ನು ಪೋಷಿಸುತ್ತದೆ ಮತ್ತು ಮರುಕಳಿಸುವ ಚರ್ಮದ ಸೋಂಕನ್ನು ಕಡಿಮೆ ಮಾಡುತ್ತದೆ.

ಹುರುಳಿಕಾಳುಗಳನ್ನು ರಾತ್ರಿಯಿಡಿ ನೆನೆಸಿಟ್ಟು, ನಂತರ ಬೆಳಗ್ಗೆ ಅದನ್ನು ರುಬ್ಬಿ ಪೇಸ್ಟ್‌ ಮಾಡಿಕೊಳ್ಳಿ. ಬಳಿಕ ದದ್ದುಗಳಿರುವ ಜಾಗದಲ್ಲಿ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ಪದೇ ಪದೇ ಮೂತ್ರ ವಿಸರ್ಜನೆಯಿಂದ ಸೋಂಕು ಕಾಡಬಹುದು ಮತ್ತು ನಿರ್ವಹಿಸಲು ಕಷ್ಟವಾಗುತ್ತದೆ. ಇದು ಉರಿಯೂತ, ಸೋಂಕು ಮತ್ತು ಗರ್ಭಕಂಠದಲ್ಲಿ ಮತ್ತು ಯೋನಿಯಲ್ಲಿ ನೋವನ್ನು ಉಂಟುಮಾಡಬಹುದು. ಇದಕ್ಕೆ ಹುರುಳಿ ಕಾಳುಗಳು ಉತ್ತಮ ಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಹುರುಳಿ ಕಾಳುಗಳನ್ನು ನೆನೆಸಿ ನಂತರ ಅದನ್ನು ನೀರಿಗೆ ಹಾಕಿ ಕುದಿಸಿ ಮೆತ್ತನೆಯ ಕಾಳುಗಳನ್ನು ಪಲ್ಯದ ರೂಪದಲ್ಲಿ ಸೇವನೆ ಮಾಡಬಹುದಾಗಿದೆ.

ಹುರುಳಿ ಕಾಳುಗಳನ್ನು ಸೇವಿಸುವುದರಿಂದ ಫ್ಲೇವನಾಯ್ಡ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಸಸ್ಯ ಆಧಾರಿತ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ. ಇವುಗಳು ಹೆಪಟೊಪ್ರೊಟೆಕ್ಟಿವ್ ಗುಣಲಕ್ಷಣಗಳನ್ನು ಹೊಂದಿರುವ ಸಾವಯವ ಸಂಯುಕ್ತಗಳಾಗಿವೆ, ಅಂದರೆ ಅವು ಯಕೃತ್ತನ್ನು ರಕ್ಷಿಸುತ್ತವೆ. ಈ ಸಂಯುಕ್ತಗಳು ಪಿತ್ತಕೋಶದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸಲು ಕೂಡ ನೆರವಾಗುತ್ತದೆ. ಹುರುಳಿಕಾಳನ್ನು ಬೇಯಿಸಿ, ಅದಕ್ಕೆ ತುಸು ಉಪ್ಪು, ಖಾರವನ್ನು ಸೇರಿಸಿ ಅನ್ನ, ದೋಸೆ, ಚಪಾತಿಯೊಂದಗೆ ಸೇವಿಸಬಹುದಾಗಿದೆ.

ಹುರುಳಿ ಕಾಳುಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸುತ್ತವೆ. ಮೂತ್ರಪಿಂಡದಲ್ಲಿ ಕ್ಯಾಲ್ಸಿಯಂ ಫಾಸ್ಫೇಟ್ ಲವಣಗಳ ಸಂಗ್ರಹದಿಂದ ಗಟ್ಟಿಯಾಗುವಿಕೆಯಿಂದ ಮೂತ್ರಪಿಂಡದ ಕಲ್ಲುಗಳು ರಚನೆಯಾಗುವುದರಿಂದ, ಈ ಕಲ್ಲುಗಳನ್ನು ಒಡೆಯುವ ಏಕೈಕ ಮಾರ್ಗವೆಂದರೆ ಸ್ವತಂತ್ರ ರಾಡಿಕಲ್ ಕಣಗಳನ್ನು ತೊಡೆದುಹಾಕಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳ ಕ್ರಿಯೆ. ಹೀಗಾಗಿ ಉತ್ಕರ್ಷಣಾ ನಿರೋಧಕಗಳಿರುವ ಹುರುಳಿಕಾಳುಗಳು ಕಿಡ್ನಿಸ್ಟೋನ್‌ಗಳನ್ನು ಕರಗಿಸಲು ಸಹಾಯ ಮಾಡುತ್ತವೆ. ನೀವು ಹುರುಳಿಕಾಳನ್ನು 7 ರಿಂದ 8 ಗಂಟೆಗಳ ಕಾಲ ನೆನೆಸಿ ನಂತರ ಸೂಪ್‌ ತಯಾರಿಸಿ ಸೇವನೆ ಮಾಡಬಹುದಾಗಿದೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement
Next Article