ಹಾಸನಾಂಬೆ ದೇವಿ ದರ್ಶನಕ್ಕೆ ಬಂದವರಿಗೆ ಕರೆಂಟ್ ಶಾಕ್ ವದಂತಿ : ಜೀವ ಉಳಿಸಿಕೊಳ್ಳಲು ಕಾಲ್ತುಳಿತ
02:36 PM Nov 10, 2023 IST
|
Bcsuddi
Advertisement
ಹಾಸನ : ಹಾಸನಾಂಬೆ ದೇವಾಲಯದಲ್ಲಿ ಕೆಲವರಿಗೆ ಕರೆಂಟ್ ಶಾಕ್ ಹೊಡೆದಿದೆ. ವಿದ್ಯುತ್ ಶಾಕ್ ಹಿನ್ನೆಲೆಯಲ್ಲಿ ಸಂತೆಪೇಟೆ ಧರ್ಮ ದರ್ಶನ ಸರತಿ ಸಾಲಿನ ಬಳಿ ದಿಢೀರ್ ನೂಕು ನುಗ್ಗಲು ಉಂಟಾಗಿದ್ದು, ಮಹಿಳೆಯರು ಒಬ್ಬರ ಮೇಲೆ ಒಬ್ಬರು ಬಿದ್ದು ಎದ್ದು ಓಡಲೆತ್ನಿಸಿದ್ದಾರೆ. ಜಗತ್ ಪ್ರಸಿದ್ಧ ಹಾಸನಾಂಬೆಯನ್ನು ಕಾಣಲು ದಿನಾಲು ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಅದರಂತೆಯೆ ಇಂದು ಕೂಡ ಸಾಕಷ್ಟು ಜನರು ದೇವರನ್ನು ಕಾಣಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ವೇಳೆ ಕರೆಂಟ್ ಶಾಕ್ ಹೊಡೆಯುತ್ತಿದೆ ಎಂಬ ವದಂತಿ ಮಾತು ಕೇಳಿ ಜನರು ಕಾಲ್ಕಿತ್ತಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಭಕ್ತರನ್ನು ಈ ವೇಳೆ ಭಯಬೀತರಾಗಿದ್ದಲ್ಲದೆ, ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇಬ್ಬರು ತೀವ್ರ ಅಸ್ವಸ್ಥಗೊಂಡಿದ್ದು,ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Next Article