For the best experience, open
https://m.bcsuddi.com
on your mobile browser.
Advertisement

ಹಾಸನಾಂಬೆ ದೇವಿ ದರ್ಶನಕ್ಕೆ ಬಂದವರಿಗೆ ಕರೆಂಟ್​ ಶಾಕ್​ ವದಂತಿ : ಜೀವ ಉಳಿಸಿಕೊಳ್ಳಲು ಕಾಲ್ತುಳಿತ

02:36 PM Nov 10, 2023 IST | Bcsuddi
ಹಾಸನಾಂಬೆ ದೇವಿ ದರ್ಶನಕ್ಕೆ ಬಂದವರಿಗೆ ಕರೆಂಟ್​ ಶಾಕ್​ ವದಂತಿ   ಜೀವ ಉಳಿಸಿಕೊಳ್ಳಲು ಕಾಲ್ತುಳಿತ
Advertisement

ಹಾಸನ : ಹಾಸನಾಂಬೆ ದೇವಾಲಯದಲ್ಲಿ ಕೆಲವರಿಗೆ ಕರೆಂಟ್‌ ಶಾಕ್‌ ಹೊಡೆದಿದೆ. ವಿದ್ಯುತ್ ಶಾಕ್‌ ಹಿನ್ನೆಲೆಯಲ್ಲಿ ಸಂತೆಪೇಟೆ ಧರ್ಮ ದರ್ಶನ ಸರತಿ ಸಾಲಿನ ಬಳಿ ದಿಢೀರ್‌ ನೂಕು ನುಗ್ಗಲು ಉಂಟಾಗಿದ್ದು, ಮಹಿಳೆಯರು ಒಬ್ಬರ ಮೇಲೆ ಒಬ್ಬರು ಬಿದ್ದು ಎದ್ದು ಓಡಲೆತ್ನಿಸಿದ್ದಾರೆ. ಜಗತ್​ ಪ್ರಸಿದ್ಧ ಹಾಸನಾಂಬೆಯನ್ನು ಕಾಣಲು ದಿನಾಲು ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಅದರಂತೆಯೆ ಇಂದು ಕೂಡ ಸಾಕಷ್ಟು ಜನರು ದೇವರನ್ನು ಕಾಣಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ವೇಳೆ ಕರೆಂಟ್​ ಶಾಕ್​ ಹೊಡೆಯುತ್ತಿದೆ ಎಂಬ ವದಂತಿ ಮಾತು ಕೇಳಿ ಜನರು ಕಾಲ್ಕಿತ್ತಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಭಕ್ತರನ್ನು ಈ ವೇಳೆ ಭಯಬೀತರಾಗಿದ್ದಲ್ಲದೆ, ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇಬ್ಬರು ತೀವ್ರ ಅಸ್ವಸ್ಥಗೊಂಡಿದ್ದು,ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Author Image

Advertisement