For the best experience, open
https://m.bcsuddi.com
on your mobile browser.
Advertisement

ಹಾಸನದಲ್ಲಿ ಆನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

11:37 AM Jan 05, 2024 IST | Bcsuddi
ಹಾಸನದಲ್ಲಿ ಆನೆ ದಾಳಿಗೆ ಕೂಲಿ ಕಾರ್ಮಿಕ ಬಲಿ
Advertisement

ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ಗುರುವಾರ ಸಂಜೆ ಆನೆ ದಾಳಿಗೆ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

ಮತ್ತಾವರ ಗ್ರಾಮದ ವಸಂತ (43) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.ಕಾರ್ಮಿಕ ವಸಂತ್ (45) ಗುರುವಾರ ಸಂಜೆ ಕೆಲಸ ಮುಗಿಸಿ ತನ್ನ ಆಪ್ತನ ಜೊತೆಗೆ ವಾಪಸ್ ಮರಳುತ್ತಿದ್ದರು. ಈ ವೇಳೆ ಏಕಾಏಕಿ ಕಾಣಿಸಿದ ಒಂಟಿ ಸಲಗ ವಸಂತ್ ಮೇಲೆ ದಾಳಿ ಮಾಡಿದೆ. ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿದ್ದಾರೆ. ಸಂಜೆ ಸುಮಾರು 6-30ರ ವೇಳೆಯಲ್ಲಿ ಈ ಘಟನೆ ನಡೆದಿದೆ.

ಇದರಿಂದ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆ ಮುಂದಾಗಿದ್ದು, ಮನುಷ್ಯ ನ ಬಲಿಯಾದ ಜೀವಕ್ಕೆ 15 ಲಕ್ಷ ಬೆಲೆ ಕಟ್ಟುತ್ತೀರಿ. ಓರ್ವ ವ್ಯಕ್ತಿ15 ಲಕ್ಷ ವಾರ್ಷಿಕವಾಗಿ ದುಡಿದು ಸಂಪಾದಿಸುತ್ತಾನೆ. ಅಂತಹವರ ಜೀವವೇ ಹೋದರೂ ಸರ್ಕಾರ ಗಮನ ಹರಿಸಿಲ್ಲ. ಹಾಗಾಗಿಯೇ ಶವ ಇಲ್ಲೇ ಇಟ್ಟು ಹೋರಾಟ ಮಾಡುತ್ತೇವೆ. ಬೆಳಿಗ್ಗೆಯೇ ಅಧಿಕಾರಿಗಳು ಬರಲಿ, ನಮ್ಮ ಜೀವ ಹಿಂಡುತ್ತಿರೊ ಸಮಸ್ಯೆಗೆ ಪರಿಹಾರ ನೀಡಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ಜನರನ್ನು ರಕ್ಷಿಸಲು ಆನೆಗಳನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು ಮಾತ್ರವಲ್ಲದೇ ಇಲ್ಲದಿದ್ದರೆ ಊರು ಬಿಟ್ಟು ಹೊರಹೋಗಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

Author Image

Advertisement