For the best experience, open
https://m.bcsuddi.com
on your mobile browser.
Advertisement

ಹಾವೇರಿ: ಭಾರತದಲ್ಲಿರುವ ಎಲ್ಲರೂ ಹಿಂದೂಗಳು ಎಂದ ವಚನಾನಂದ ಶ್ರೀ

05:32 PM Aug 16, 2024 IST | BC Suddi
ಹಾವೇರಿ  ಭಾರತದಲ್ಲಿರುವ ಎಲ್ಲರೂ ಹಿಂದೂಗಳು ಎಂದ ವಚನಾನಂದ ಶ್ರೀ
Advertisement

ಹಾವೇರಿ: ಭಾರತದಲ್ಲಿರುವ ಪ್ರತಿಯೊಬ್ಬರೂ ಹಿಂದೂಗಳು ಭಾರತದಲ್ಲಿರುವ ಮುಸ್ಲಿಮರೂ ಹಿಂದೂಗಳೇ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಹಿಂದೂ ಅಂದರೆ ಸತ್ಯ ಹಾಗೂ ಸನಾತನ ಎಂದು ತಿಳಿಸಿದರು. ಬೇರೆ ಬೇರೆ ಧರ್ಮಗಳು ಉತ್ಪತ್ತಿ ಆಗುವ ಮುನ್ನ ಇದ್ದದ್ದೇ ಹಿಂದೂ ಧರ್ಮ ಅಖಂಡ ಭಾರತ ಇದು ಮುಸ್ಲಿಂ ಆಚರಣೆ ಯಾವ ರೀತಿ ಇವೆ? ಸನಾತನ ಧರ್ಮ ಹಿಂದೂವಿನ ಭಾಗ. ಆರ್ಯರೂ ಹಿಂದೂ ಭಾಗವೇ ಆಗಿದ್ದಾರೆ.

ಹಿಂದೂ ಎಂಬುದಕ್ಕೆ ಗಡಿ ಇಲ್ಲ ಎಂದು ಸ್ವಾಮೀಜಿ ತಿಳಿಸಿದರು. ಜಗತ್ತಿನ ಸಿದ್ಧಾಂತ ತತ್ವಗಳಿಗೆ ಮೂಲ ಹಿಂದೂ. ಶ್ರೀಲಂಕಾ ಅಪಘಾನಿಸ್ತಾನೀಯರ ಮೂಲ ಹಿಂದೂ. ದಯೆಯ ಬಗ್ಗೆಯೇ ಸಾಕ್ರೆಟಿಸ್, ತುಕಾರಾಮ್, ನಾಮದೇವ್, ಶಂಕರರು, ಬಸವಣ್ಣ, ಎಲ್ಲರೂ ಇದನ್ನ ಹೇಳಿದ್ದರು. ಆಚರಣೆ ಮನೆಯಲ್ಲಿ ಇರಬೇಕು. ದೇಶ ಸಮುದಾಯ ಅಂತ ಬಂದಾಗ ನಾವೆಲ್ಲಾ ಹಿಂದೂಗಳು ಎಂದು ಶ್ರೀಗಳು ತಿಳಿಸಿದರು.

Advertisement
Author Image

Advertisement