ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹಂಸರಾಜ್ ಭಾರದ್ವಾಜ್ ಮಾಡಿದ್ರೆ ತಪ್ಪಲ್ಲ, ದಲಿತ ರಾಜ್ಯಪಾಲ ಗೆಹ್ಲೋಟ್ ಮಾಡಿದ್ರೆ ತಪ್ಪಾ - ಸುನಿಲ್ ಕುಮಾರ್ ಪ್ರಶ್ನೆ

10:56 AM Aug 24, 2024 IST | BC Suddi
Advertisement

ಬೆಂಗಳೂರು : ರಾಜ್ಯಪಾಲರು 11 ವಿಧೇಯಕಗಳನ್ನ ವಾಪಸ್ ಕಳಿಸರೋದಕ್ಕೆ ರಾಜ್ಯಪಾಲರ ವಿರುದ್ಧ ಕಿಡಿ ಕಾರುತ್ತಿರುವ ಕಾಂಗ್ರೆಸ್ ಗೆ ತಿರುಗೇಟು ನೀಡಿದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಹಿಂದೆ ರಾಜ್ಯದ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಮಾಡಿದಾಗ ತಪ್ಪಲ್ಲ ಈಗ ದಲಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾಡಿದರೆ ತಪ್ಪಾ ಎಂದು ಪ್ರಶ್ನಿಸಿದರು.

Advertisement

ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ರಾಜ್ಯಪಾಲರ ವಿರುದ್ಧ ಮಾತನಾಡಿದ ಕಾಂಗ್ರೆಸ್ ವಿರುದ್ಧ ಶಾಸಕ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ತಮ್ಮ ತಪ್ಪನ್ನ ಮುಚ್ಚಿಕೊಳ್ಳಲು ಪ್ರಯತ್ನ ಮಾಡುತ್ತಿದೆ..ಅವರ ತಪ್ಪನ್ನ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ, ರಾಜ್ಯಪಾಲರ ಮೇಲೆ ಹಾಕಲಾಗ್ತಿದೆ. ಬಿಲ್‌ಗಳನ್ನ ವಾಪಸ್ ಕಳಿಸುವ ಪ್ರಕ್ರಿಯೆ ಇದೇ ಮೊದಲೇನು ನಡೆದಿಲ್ಲ.

ಈ ಹಿಂದೆ ಅನೇಕ ಬಾರಿ ಈ ರೀತಿಯ ಘಟನೆ ನಡೆದಿದೆ. ಈ ಹಿಂದೆ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅನೇಕ ಬಿಲ್ ವಾಪಸ್ ಕಳಿಸಿದ್ರು,ಹಂಸರಾಜ್ ಭಾರದ್ವಾಜ್ ಮಾಡಿದ್ರೆ ತಪ್ಪಲ್ಲ, ದಲಿತ ರಾಜ್ಯಪಾಲ ಗೆಹ್ಲೋಟ್ ಮಾಡಿದ್ರೆ ತಪ್ಪಾ..?ಕಾಂಗ್ರೆಸ್ ಡಬಲ್‌ ಸ್ಟ್ಯಾಂಡರ್ಡ್ ಬಿಡಬೇಕು ಎಂದು ಅಗ್ರಹಿಸಿದರು, ಇನ್ನೂ ರಾಜ್ಯದಲ್ಲಿ ಒಬ್ಬ ಮಂತ್ರಿ‌ಇಲ್ಲ. ಎಲ್ಲರೂ ದೆಹಲಿಗೆ ಹೋಗಿ‌ ಕುಳಿತಿದ್ದಾರೆ, ದೆಹಲಿಯಲ್ಲಿ ಆಡಳಿತ ನಡೆಸೋದಲ್ಲ, ಕರ್ನಾಟಕದಲ್ಲಿ ಆಡಳಿತ ನಡೆಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ ಸುನಿಲ್ ಕುಮಾರ್.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement
Next Article