For the best experience, open
https://m.bcsuddi.com
on your mobile browser.
Advertisement

ಸಿನಿಮಾ ಸ್ಟೈಲಲ್ಲಿ ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಹೋಗಿ ಕಿರಾತಕ ಜೈಲು ಪಾಲು..!

05:33 PM Dec 27, 2023 IST | Bcsuddi
ಸಿನಿಮಾ ಸ್ಟೈಲಲ್ಲಿ ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಹೋಗಿ ಕಿರಾತಕ ಜೈಲು ಪಾಲು
Advertisement

ಧಾರವಾಡ : ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಥೇಟ್ ಸಿನಿಮಾ ಸ್ಟೈಲಲ್ಲಿ ಕೊಲೆ ಮಾಡಿ, ಬಳಿಕ ಅದನ್ನು ಅಪಘಾತ ಎಂದು ಬಿಂಬಿಸಿರುವ ಘಟನೆ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ನಡೆದಿದೆ.

ತಡಕೋಡ ಗ್ರಾಮದ ಸುರೇಶ ದೇವರವರ ಕೊಲೆಯಾದ ವ್ಯಕ್ತಿ. ಶಿವಪ್ಪ ಬಡಿಗೇರ ಕೊಲೆ ಮಾಡಿದ ಆರೋಪಿಯಾಗಿದ್ದು ಪೊಲೀಸರ ಬಂಧಿಸಿದ್ದಾರೆ. ಇಬ್ಬರು ತಡಕೋಡ ಗ್ರಾಮದ ನಿವಾಸಿಗಳಾಗಿದ್ದಾರೆ. ಮೃತ ಸುರೇಶ ಅವರ ಮನೆಯಲ್ಲಿಯೇ ಕೊಲೆ ಮಾಡಿದ್ದ ಆರೋಪಿ ಶಿವಪ್ಪ ಬಡಿಗೇರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶಿವಪ್ಪನಿಗೆ ಮೃತ ಸುರೇಶ 60 ಸಾವಿರ ಸಾಲ‌ ನೀಡಿದ್ದರು. ಇದರಲ್ಲಿ 30 ಸಾವಿರ ಸಾಲ ತೀರಿಸಿದ್ದರು. ಉಳಿದ‌ 30 ಸಾವಿರ ಸಾಲದ ಹಣ ವಾಪಸ್ ಕೊಡುವಂತೆ ಸುರೇಶ ಕೇಳಿದ್ದರು. ಸಾಲ ವಾಪಸ್ ಕೇಳಿದ್ದ ಕಾರಣಕ್ಕೆ ಕೊಲೆ ಮಾಡಲಾಗಿದೆ. ಕೊಲೆ‌ ಮಾಡಿದ ಆರೋಪಿ ಶಿವಪ್ಪ, ತಾನೇನು ಮಾಡಿಯೇ ಇಲ್ಲ. ಸುರೇಶ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಘಟನೆ ನಡೆದ ಸ್ಥಳದಲ್ಲಿ‌ ಇದ್ದ ಗ್ರಾಮಸ್ಥರ ಮುಂದೆ ಹೇಳಿಕೊಂಡಿದ್ದ. ಆರಂಭದಲ್ಲಿ ಇದೊಂದು ಅಪಘಾತ ಎಂದು ಎಲ್ಲರೂ ನಂಬಿದ್ದರು. ಆದರೆ, ಮೃತ ವ್ಯಕ್ತಿಯ ತಲೆಗೆ ಮಾತ್ರ ಗಂಭೀರವಾಗಿ ಗಾಯವಾಗಿತ್ತು‌. ಇದರಿಂದ ಅನುಮಾನಗೊಂಡ ಪೊಲೀಸರು ಶಿವಪ್ಪನನ್ನು ವಿಚಾರಣೆಗೆ ಒಳಪಡಿಸಿದ ನಂತರ, ಹತ್ಯೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.

Advertisement
Author Image

Advertisement