'ಸಿಎಂ ಸಿದ್ದರಾಮಯ್ಯರು ರಾಮನ ಆದರ್ಶ, ಜನಾನುರಾಗ ಪಡೆಯಲಿ' - ಸುಬುಧೇಂದ್ರ ತೀರ್ಥರು
04:52 PM Jan 02, 2024 IST
|
Bcsuddi
Advertisement
ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀರಾಮನ ಹೆಸರಿಟ್ಟುಕೊಂಡಿದ್ದು ಅವರೂ ಶ್ರೀರಾಮನ ಆದರ್ಶ, ಜನಾನುರಾಗ ಪಡೆಯಲಿ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ.
Advertisement
ಅಯೋಧ್ಯೆಯಲ್ಲಿರುವುದು ಬಿಜೆಪಿಯ ರಾಮ, ನಮ್ಮ ರಾಮ ಸಿದ್ದರಾಮಯ್ಯ ಎಂಬ ಮಾಜಿ ಸಚಿವ ಆಂಜನೇಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಭು ಶ್ರೀರಾಮ ಎಲ್ಲ ರೀತಿಯಿಂದಲೂ ಆದರ್ಶನೀಯ, ಅನುಕರಣನೀಯ. ಶ್ರೀ ರಾಮನ ಹೋಲಿಕೆ ಮತ್ತೊಬ್ಬರಿಗೆ ಮಾಡುವುದು ಸರಿಯಲ್ಲ ಎಂದರು.
ಇನ್ನು ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಯಾವುದೇ ದೇಶವಿದ್ರೋಹದ ಕೆಲಸವಾಗಲಿ, ಸಮುದಾಯಗಳ ನಡುವಿನ ಸಂಘರ್ಷವಾಗಲಿ ಅಲ್ಲ. ಅಲ್ಲಿ ಮಂದಿರ ನಿರ್ಮಿಸುವುದು ನಮ್ಮೆಲ್ಲರ ಹಕ್ಕು ಎಂದಿದ್ದಾರೆ.
Next Article