For the best experience, open
https://m.bcsuddi.com
on your mobile browser.
Advertisement

'ಸಿಎಂ ಇಬ್ರಾಹಿಂ ಮಗನ ಚುನಾವಣೆಗೆ ನನ್ನಿಂದ ಆರ್ಥಿಕ ಸಹಾಯ ಪಡೆದಿದ್ದಾರೆ' - ಟಿಎ ಶರವಣ

02:43 PM Nov 21, 2023 IST | Bcsuddi
 ಸಿಎಂ ಇಬ್ರಾಹಿಂ ಮಗನ ಚುನಾವಣೆಗೆ ನನ್ನಿಂದ ಆರ್ಥಿಕ ಸಹಾಯ ಪಡೆದಿದ್ದಾರೆ    ಟಿಎ ಶರವಣ
Advertisement

ಬೆಂಗಳೂರು : ಮಗನ ಚುನಾವಣೆಗಾಗಿ ಸಿಎಂ ಇಬ್ರಾಹಿಂ ಅವರು ನನ್ನಿಂದ ಆರ್ಥಿಕ ಸಹಾಯ ಪಡೆದಿದ್ದಾರೆ ಎಂದು ಪರಿಷತ್ ಸದಸ್ಯ ಶರವಣ ಆರೋಪ ಮಾಡಿದ್ದಾರೆ.

ಎಂಎಲ್‌ಸಿ ಮಾಡೋಕೆ ಶರವಣರಿಂದ ಕುಮಾರಸ್ವಾಮಿ ಹಣ ಪಡೆದಿಲ್ಲ ಅಂತ ಮಗನ ಮೇಲೆ ತಲೆ ಕೈ ಇಟ್ಟು ಆಣೆ ಮಾಡಿ ಎಂಬ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಬೇರೆ ಪಕ್ಷದಿಂದ ಬಂದವನಲ್ಲ. ಸಮಯಕ್ಕೆ ತಕ್ಕಂತೆ ಪಕ್ಷ ಬದಲಾವಣೆ ಮಾಡೋನೂ ನಾನಲ್ಲ. 25 ವರ್ಷಗಳಿಂದ ದೇವೇಗೌಡ, ಕುಮಾರಸ್ವಾಮಿ ಜೊತೆ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡ್ತಿದ್ದೇನೆ. ನನ್ನ ರಕ್ತವೇ ಜೆಡಿಎಸ್ ಆಗಿದೆ ಎಂದರು.

ಇನ್ನು ಅಧಿಕಾರಕ್ಕಾಗಿ ಯಾವುದೇ ಪಕ್ಷಕ್ಕೆ ಹೋಗಲ್ಲ. ವಿರೋಧ ಪಕ್ಷ ನಾಯಕ ಮಾಡಿಲ್ಲ ಅಂತ ಹೀಗೆ ಮಾತನಾಡುತ್ತಿದ್ದಾರಾ? ಕಾಂಗ್ರೆಸ್‌ನಲ್ಲಿಅಧಿಕಾರ ಕೊಡಲಿಲ್ಲ ಅಂತ ಜೆಡಿಎಸ್‌ಗೆ ಬಂದಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

Advertisement

Author Image

Advertisement