For the best experience, open
https://m.bcsuddi.com
on your mobile browser.
Advertisement

'ಸಾಹಸೋದ್ಯಮ'ಕ್ಕೆ ಕೈಹಾಕುವವರಿಗೆ ಪ್ರತಿ ತಿಂಗಳು 25,000 ರೂ ಭತ್ಯೆ - ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

11:38 AM Aug 11, 2024 IST | BC Suddi
 ಸಾಹಸೋದ್ಯಮ ಕ್ಕೆ ಕೈಹಾಕುವವರಿಗೆ ಪ್ರತಿ ತಿಂಗಳು 25 000 ರೂ ಭತ್ಯೆ   ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ
Advertisement

ಬೆಂಗಳೂರು: ಯುವಕರಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಬಗ್ಗೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸ್ಟಾರ್ಟಪ್ ಪೀಡಿಯಾ ಪೋಸ್ಟ್‌ ಪ್ರಕಾರ, ಈಗಿರುವ ಉದ್ಯೋಗ ಬಿಟ್ಟು 'ಸಾಹಸೋದ್ಯಮ'ಕ್ಕೆ ಕೈಹಾಕುವವರಿಗೆ ಸರ್ಕಾರ ಪ್ರತಿ ತಿಂಗಳು 25,000 ರೂಪಾಯಿ ಭತ್ಯೆ/ವೇತನ ನೀಡಲಿದೆ ಎಂದು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಮನಿಕಂಟ್ರೋಲ್ ಸ್ಟಾರ್ಟಪ್ ಕಾಂಕ್ಲೇವ್‌ನಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಶೀಘ್ರದಲ್ಲೇ ಈ ಯೋಜನೆಗೆ ಚಾಲನೆ ಸಿಗಲಿದ್ದು, ದೇಶದಲ್ಲೇ ಮೊಟ್ಟ ಮೊದಲ ಪ್ರಯತ್ನ ಇದಾಗಿದೆ. ಅತಿಯಾದ ಹಣದುಬ್ಬರ/ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಅಭ್ಯರ್ಥಿಗಳ ದಿನನಿತ್ಯದ ಖರ್ಚಿಗಾಗಿ ಒಂದು ವರ್ಷಗಳ ಕಾಲ 25 ಸಾವಿರ ರೂಪಾಯಿ ಭತ್ಯೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ ಈ ರಾಜೀವ್‌ ಗಾಂಧಿ ಎಂಟರ್‌ಪ್ರ್ಯೂನರ್ಶಿಪ್ ಪ್ರೋಗ್ರಾಂ (RGEP) ಯೋಜನೆಯನ್ನು ಪ್ರಕಟಿಸಿದ್ದರು. ವಿಜ್ಞಾನ ಅಥವಾ ಇಂಜಿನಿಯರಿಂಗ್‌ ಹಿನ್ನೆಲೆ ಹೊಂದಿರುವ ಯುವ ಸಾಹಸೋದ್ಯಮಿಗಳಿಗೆ ಈ ಕಾರ್ಯಕ್ರಮ ರೂಪಿಸಲಾಗಿದ್ದು, ಅವರಿಗಾಗಿ K-Tech ಇನ್ನೋವೇಶನ್‌ ಹಬ್‌ನಿಂದ ಮಾರ್ಗದರ್ಶನ ಹಾಗೂ ಭತ್ಯೆ ನೀಡಲಿದೆ. ಕಳೆದ ವಿಧಾನಸಭೆ ಚುನಾವಣೆ ಮುನ್ನ ಕಾಂಗ್ರೆಸ್‌ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಅಧಿಕಾರಕ್ಕೆ ಬಂದ ಬಳಿಕ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಹಾಗೂ ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಗ್ಯಾರಂಟಿ ಯೋಜನೆಗಳೇ ತೆಲಂಗಾಣದಲ್ಲೂ ಕಾಂಗ್ರೆಸ್‌ ಕೈಹಿಡಿದಿದ್ದವು. ಆದರೆ ಇನ್ನೊಂದು ಕಡೆ, ಈ ಗ್ಯಾರಂಟಿ ಯೋಜನೆಗಳು ಆಡಳಿತ, ಅನುದಾನ ಹಾಗೂ ಅಭಿವೃದ್ಧಿ ಯೋಜನೆಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದ ತತ್ತರಿಸಿ ಹೋಗಿರುವ ಬಡ - ಮಧ್ಯಮ ವರ್ಗದ ಜನರಿಗೆ ಇದರಿಂದ ಭಾರೀ ಅನುಕೂಲವಾಗಿದೆ ಎಂದು ಗ್ಯಾರಂಟಿ-ಪರ ಇರುವವರು ವಾದಿಸಿದರೆ, ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಗ್ಯಾರಂಟಿ-ವಿರೋಧಿಗಳ ವಾದವಾಗಿದೆ. ಇನ್ನು ಈ ಹೊಸ RGEP ಯೋಜನೆ ಯಾವಾಗ, ಹೇಗೆ ಜಾರಿಯಾಗುತ್ತದೆ? ಏನೆಲ್ಲಾ ನಿಯಮಗಳಿರುತ್ತವೆ? ಎಷ್ಟರ ಮಟ್ಟಿಗೆ ಸಫಲವಾಗಲಿದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆ.

Author Image

Advertisement