For the best experience, open
https://m.bcsuddi.com
on your mobile browser.
Advertisement

ಸರ್ಕಾರದ ಯೋಜನೆಗಳಿಗೆ ಸಹಕಾರ ಕೋರಲು ಎಲ್ಲ ಸಂಸದರನ್ನು ಭೇಟಿಯಾಗುವೆ - ಸಿಎಂ

04:25 PM Jun 27, 2024 IST | Bcsuddi
ಸರ್ಕಾರದ ಯೋಜನೆಗಳಿಗೆ ಸಹಕಾರ ಕೋರಲು ಎಲ್ಲ ಸಂಸದರನ್ನು ಭೇಟಿಯಾಗುವೆ   ಸಿಎಂ
Advertisement

ಬೆಂಗಳೂರು : ಇಂದು ನಾನು ದೆಹಲಿಗೆ ತೆರಳುತ್ತಿದ್ದು, ನಮ್ಮ ರಾಜ್ಯದಿಂದ ಆಯ್ಕೆಗೊಂಡ ಎಲ್ಲ ಸಂಸದರನ್ನು ಭೇಟಿ ಮಾಡಿ ನಮ್ಮ ಸರ್ಕಾರದ ಯೋಜನೆಗಳಿಗೆ ಅಗತ್ಯ ಸಹಕಾರ ಕೋರುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ‌ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯೋತ್ಸವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಸೇರಿದಂತೆ ವಿವಿಧ ಇಲಾಖೆಗಳ ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯಕ್ಕೆ ಅಗತ್ಯ ಹಣ ಬಿಡುಗಡೆ ಮಾಡಬೇಕೆಂದು ಕೋರಲಾಗುವುದು ಎಂದರು. ಇದೇ ತಿಂಗಳ 29 ರಂದು‌ ಬೆಳಗ್ಗೆ 8ಕ್ಕೆ ಪ್ರಧಾನಿಯವರ ಅಪಾಯಿಂಟ್‌ಮೆಂಟ್ ಸಿಕ್ಕಿದೆ ‌ಅಂತಾನೂ ಸಿಎಂ ತಿಳಿಸಿದ್ದಾರೆ.

Author Image

Advertisement