ಸಮುದ್ರ ಮಧ್ಯೆ ಸಿಲುಕಿದ 13 ಮೀನುಗಾರರ ರಕ್ಷಣೆ
05:39 PM May 22, 2024 IST | Bcsuddi
Advertisement
ಕೊಚ್ಚಿ: ಎಂಜಿನ್ಗೆ ನೀರು ನುಗ್ಗಿ ಸಮುದ್ರ ಮಧ್ಯೆ ಸಿಲುಕಿದ್ದ ಕೇರಳ ತೀರದ 13 ಮಂದಿ ಮೀನುಗಾರರು ಹಾಗೂ ದೋಣಿಯನ್ನು ರಕ್ಷಿಸಲಾಗಿದೆ ಎಂದು ಭಾರತೀಯ ಕರಾವಳಿ ಭದ್ರತಾ ಪಡೆ ತಿಳಿಸಿದೆ.
ಚಾವಕ್ಕಾಡ್ ಕರಾವಳಿಯಿಂದ 31 ನಾಟಿಕಲ್ ಮೈಲಿ ದೂರದಲ್ಲಿ ಸಿಲುಕಿದ್ದ ಭಾರತದ ಮೀನುಗಾರಿಕಾ ದೋಣಿ ಹಾಗೂ ಅದರಲ್ಲಿದ್ದ 13 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕರಾವಳಿ ಭದ್ರತಾ ಪಡೆ, ಕರಾವಳಿ ರಕ್ಷಣಾ ನೌಕೆ ಅಭಿನವ್ ಪ್ರತಿಕೂಲ ಹವಾಮಾನದ ಹೊರತಾಗಿಯೂ, ಕಠಿಣ ಪರಿಸ್ಥಿತಿಯಲ್ಲಿ ಮೀನುಗಾರಿಕಾ ಹಡಗಿಗೆ ತಾಂತ್ರಿಕ ಸಹಾಯವನ್ನು ಒದಗಿಸಿದೆ ಎಂದು ತಿಳಿಸಿದೆ.
Advertisement