ಸಚಿವ ಜಮೀರ್ ಹೇಳಿಕೆ ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ..!-ವಿಪಕ್ಷ ನಾಯಕ ಆರ್.ಅಶೋಕ್
05:20 PM Nov 18, 2023 IST | Bcsuddi
Advertisement
ಬೆಂಗಳೂರು : ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರ ಭಾಷಣದಲ್ಲಿ ಸಚಿವ ಜಮೀರ್ ಅಹಮದ್ ಹೇಳಿಕೆಯನ್ನೇ ಮುಂದಿನ ದಿಗಳಲ್ಲಿ ಬಿಜೆಪಿಯು ಅಸ್ತ್ರವನ್ನಾಗಿ ಮಾಡಿಕೊಂಡು ಜಾತೀವಾದಿ ಕಾಂಗ್ರೆಸ್ನ ಮುಖವಾಡ ಕಳಚಲಾಗುವುದು ಎಂದು ಬಿಜೆಪಿ ನೂತನ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಜಮೀರ್ ಅಹಮದ್ ಸಂವಿಧಾನದ ಆಶೋತ್ತರಗಳಿಗೆ ವಿರುದ್ಧವಾಗಿ ಮಾತನಾಡಿದ್ದು, ಇಂಥ ವಿವೇಕ ವಿಲ್ಲದವರ ವಿರುದ್ದ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
Advertisement