ಸಚಿವರುಗಳ ಪ್ರತ್ಯೇಕ ಸಭೆಗೆ ಸಿಎಂ ಸಿದ್ದರಾಮಯ್ಯ ಗರಂ..!
ಬೆಂಗಳೂರು : ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರ ಪ್ರತ್ಯೇಕ ಸಭೆಗಳು ನಡೆಸುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಸಂಪುಟ ಸಭೆಯ ಆರಂಭದಲ್ಲಿ ಸಚಿವರ ಪ್ರತ್ಯೇಕ ಸಭೆಗಳ ಬಗ್ಗೆ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ ಪ್ರತಿಪಕ್ಷಗಳಿಗಿಂತ ನೀವೆ ಹೆಚ್ಚು ಪ್ರಸ್ತಾಪಗಳನ್ನ ಮಾಡುತ್ತಿದ್ದೀರಾ ಎಂದು ಗರಂ ಆಗಿದ್ದಾರೆ. ಇತ್ತಿಚೆಗೆ ಕೆಲ ಸಚಿವರುಗಳು ಕೆಲ ಶಾಸಕರೊಂದಿಗೆ ಬ್ರೇಕ್ ಫಾಸ್ಟ್ ಮೀಟಿಂಗ್, ಡಿನ್ನರ್ ಮೀಟಿಂಗ್ ಎಂದು ಸಭೆ ನಡೆಸಿದ್ದರು. ಇದ್ರ ಬಗ್ಗೆ ಇಂದು ಖುದ್ದು ಸಂಪುಟ ಸಭೆಯ ಆರಂಭದಲ್ಲೇ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿ ಮುಖ್ಯಮಂತ್ರಿಗಳ ಬದಲಾವಣೆ ಅದು ಇದು ಎಂದೆಲ್ಲ ಸಭೆಗಳನ್ನ ನಡೆಸಿ ಮಾತನಾಡುತ್ತಿದ್ದೀರಾ ಇದನ್ನೆಲ್ಲ ಬಿಟ್ಟು ಕೆಲಸ ಮಾಡಿ ಎಂದು ತಾಕೀತು ಮಾಡಿದ್ದಾರೆ. ನನಗೆ ಯಾರ್ಯಾರು ಎಲೆಲ್ಲಿ ಸಭೆಗಳನ್ನ ನಡೆಸಿದ್ದೀರಾ ಎಲ್ಲವೂ ತಿಳಿದಿದೆ ಪ್ರತಿಪಕ್ಷಗಳಿಗಿಂತ ನೀವೆ ಹೆಚ್ಚು ಮುಖ್ಯಮಂತ್ರಿಗಳ ಬದಲಾವಣೆ ಎಂದೆಲ್ಲ ಮಾತನಾಡುತ್ತಿದ್ದೀರಾ ಇದನ್ನೆಲ್ಲ ಬಿಟ್ಟು ಮೊದಲು ಕೆಲಸ ಮಾಡಿ ಎಂದು ಸಂಪುಟ ಸಭೆಯಲ್ಲಿ ಸಿಎಂ ಸೂಚಿಸಿದ್ದಾರೆ. ಪ್ರತ್ಯೇಕ ಸಭೆಗಳಿಗೆ ಸಿಎಂ ಏನೋ ಗರಂ ಆಗಿದ್ದಾರೆ ಮೊದಲು ಕೆಲಸ ಮಾಡಿ ಎಂದೆಲ್ಲ ತಾಕೀತು ಮಾಡಿದ್ದಾರೆ ಆದ್ರೆ ಇನ್ಮೆಂದೆಯಾದ್ರು ಸಚಿವರ ಪ್ರತ್ಯೇಕ ಸಭೆಗಳು ನಿಲ್ಲಲಿದ್ಯಾ ಕಾದು ನೋಡಬೇಕು.