ಸಂವಿಧಾನವು ಜನರಿಗೆ ನೀಡಿರುವ ಎಲ್ಲ ಹಕ್ಕುಗಳನ್ನು ಬಿಜೆಪಿ ಸರ್ಕಾರವು ಹತ್ತಿಕ್ಕುತ್ತಿದೆ -ಕಾಂಗ್ರೆಸ್ ಆರೋಪ
06:14 PM Jan 20, 2024 IST
|
Bcsuddi
Advertisement
ನವದೆಹಲಿ: ಅಸ್ಸಾಂನಲ್ಲಿ ನಡೆಯುತ್ತಿದ್ದ ಭಾರತ್ ಜೋಡೊ ನ್ಯಾಯ ಯಾತ್ರೆ ಮೇಲೆ 'ಬಿಜೆಪಿಯ ಗೂಂಡಾಗಳು' ದಾಳಿ ನಡೆಸಿದ್ದು .ಸಂವಿಧಾನವು ಜನರಿಗೆ ನೀಡಿರುವ ಎಲ್ಲ ಹಕ್ಕುಗಳನ್ನು ಬಿಜೆಪಿ ಸರ್ಕಾರವು ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Advertisement
ಈ ಬಗ್ಗೆ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆಸುವ ಇಂತಹ ತಂತ್ರಗಳಿಗೆ ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಾಹನಗಳ ಮೇಲೆ ಅಸ್ಸಾಂನ ಲಖೀಂಪುರದಲ್ಲಿ ಹೀನಾಯವಾಗಿ ದಾಳಿ ನಡೆಸಿರುವುದು, ಪಕ್ಷದ ಬ್ಯಾನರ್ಗಳು, ಪೋಸ್ಟರ್ಗಳನ್ನು ಬಿಜೆಪಿಯ ಗೂಂಡಾಗಳು ಹರಿದುಹಾಕಿರುವುದನ್ನು ಬಲವಾಗಿ ಖಂಡಿಸುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ.
Next Article