ಸಂತ್ರಸ್ತೆ ಕಿಡ್ನಾಪ್ ಪ್ರಕರಣ - ಸಾರಾ ಮಹೇಶ್ಗೆ ಎದುರಾಗಲಿದೆಯಾ ಎಸ್ಐಟಿ ಸಂಕಷ್ಟ
09:37 AM May 31, 2024 IST | Bcsuddi
Advertisement
ಬೆಂಗಳೂರು: ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧದ ಕಿಡ್ನಾಪ್ ಆರೋಪ ಪ್ರಕರಣದಲ್ಲಿ ಮಾಜಿ ಶಾಸಕ ಸಾರಾ ಮಹೇಶ್ ಅವರಿಗೂ ನೋಟೀಸ್ ನೀಡಲು ಎಸ್ಐಟಿ ಸಿದ್ಧತೆ ನಡೆಸಿದೆ.
ಎಸ್ಐಟಿ ಸಲ್ಲಿಸಿದ್ದ ರಿಮ್ಯಾಂಡ್ ಅರ್ಜಿಯಲ್ಲಿ ಸಾರಾ ಮಹೇಶ್ ಹೆಸರು ಉಲ್ಲೇಖವಾಗಿದ್ದು, ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಎಸ್ಐಟಿ ಮುಂದೆ ಸಾರಾ ಮಹೇಶ್ ಹೆಸರು ಉಲ್ಲೇಖಿಸಿದ್ದಾರೆ.
ತಾನೂ ಕಿಡ್ನಾಪ್ ಆಗಿಲ್ಲ ಅಂತ ಸುದ್ದಿಗೋಷ್ಠಿ ಮಾಡಲು ಸಂತ್ರಸ್ತೆಗೆ ಸಾರಾ ಮಹೇಶ್ ಒತ್ತಾಯ ಮಾಡಿರೋದಾಗಿ ಆರೋಪಿಗಳು ಹೇಳಿಕೆ ನೀಡಿದ್ದು, ಸಂತ್ರಸ್ತ ಮಹಿಳೆಯನ್ನ ಕರೆದೊಯ್ದು ಸುದ್ದಿಗೋಷ್ಠಿ ಮಾಡಲು ಪ್ರಯತ್ನಿಸಿದ್ದರು.
Advertisement
ಆದ್ರೆ ಅವತ್ತೆ ರೇವಣ್ಣರನ್ನ ವಿಚಾರಣೆಗೆ ಕರೆದ ಕಾರಣ ಸುದ್ದಿಗೋಷ್ಠಿ ರದ್ದಾಗಿತ್ತು ಅಂತ ಆರೋಪಿ ಕೀರ್ತಿ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾನೆ. ಈ ಹಿನ್ನೆಲೆ ಎಸ್ ಐಟಿ ಅಧಿಕಾರಿಗಳು ಮಾಜಿ ಶಾಸಕ ಸಾರಾ ಮಹೇಶ್ಗೆ ನೋಟೀಸ್ ನೀಡಲು ಸಿದ್ಧತೆ ನಡೆಸಿದ್ದಾರೆ.