ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 'ಡಿ ಬಾಸ್', ಪವಿತ್ರಾ ಗೌಡ ವಕೀಲರ ತಂಡ ಭೇಟಿ..!
05:34 PM Jul 14, 2024 IST | Bcsuddi
Advertisement
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 'ಡಿ ಬಾಸ್' ಹಾಗೂ ಪವಿತ್ರಾ ಗೌಡ ವಕೀಲರ ತಂಡ ಭೇಟಿಯಾಗಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದೆ. ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಕೇಸು ನಡೆಸುತ್ತಿರುವ ಬೆಂಗಳೂರಿನ ವಕೀಲ ನಾರಾಯಣ ಸ್ವಾಮಿ ಜೀ ಮತ್ತು ತಂಡ ಭೇಟಿಯಾಗಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ. ಈ ತಂಡದಲ್ಲಿ ವಕೀಲರಾದ ರಾಕೇಶ್, ಶಶಾಂಕ್, ಮಂಜುನಾಥ್, ಶಿವಕುಮಾರ್, ಶೇಷಣ್ಣ, ಸೋಮಶೇಖರ್ ಇದ್ದರು