'ಶೀಘ್ರದಲ್ಲೇ ಪಕ್ಷ ತೊರೆದವರ ಜತೆಗೆ ಕಾಂಗ್ರೆಸ್'ನ ಹಲವು ಮುಖಂಡರು ಬಿಜೆಪಿ ಸೇರಲಿದ್ದಾರೆ'- ರಾಘವೇಂದ್ರ
09:50 AM Jan 27, 2024 IST | Bcsuddi
Advertisement
ಶಿರಸಿ: ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ಮೂಲಕ ಘರ್ ವಾಪಸಿ ಶುರುವಾಗಿದೆ, ಶೀಘ್ರದಲ್ಲೇ ಪಕ್ಷ ತೊರೆದವರ ಜತೆಗೆ ಕಾಂಗ್ರೆಸ್'ನ ಹಲವು ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ಸಂಸದ ಬಿ.ವೈ .ರಾಘವೇಂದ್ರ ಶಾಕಿಂಗ್ ಸುದ್ದಿ ನೀಡಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿ ಮಾತನಾಡಿ, ಘರ್ ವಾಪಸಿ ಆರಂಭ ಮಾತ್ರ. ಇನ್ನು ಹಲವು ಕಾಂಗ್ರೆಸ್ಸಿಗರು ಬಿಜೆಪಿಗೆ ಬರಲಿದ್ದು, ಈ ಕುರಿತು ಚರ್ಚೆಯಲ್ಲಿದ್ದಾರೆ. ಪ್ರಧಾನಿ ಮೋದಿ ನೇತೃತ್ವ ಮೆಚ್ಚಿ ಈ ಘರ್ ವಾಪಸಿ ಆಗುತ್ತಿದೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಿಸಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ರಾಜ್ಯದ 28 ಸಂಸದ ಸ್ಥಾನವನ್ನು ಗೆಲ್ಲಿಸಿ ಕೇಂದ್ರಕ್ಕೆ ಶಕ್ತಿಯಾಗಿ ನೀಡಲಾಗುವುದು ಎಂದರು.
Advertisement