ಶಿರೂರು ಗುಡ್ಡ ಕುಸಿತ: ಕೇರಳದ ಬೆಂಜ್ ಲಾರಿ ಹಾಗೂ ಅರ್ಜುನ್ ಶವ ಪತ್ತೆ
04:28 PM Sep 25, 2024 IST | BC Suddi
Advertisement
ಅಂಕೋಲಾ : ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಬೆಂಜ್ಲಾರಿ ಹಾಗೂ ಅದರ ಚಾಲಕ ಅರ್ಜುನ ಅವರ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಬಾರ್ಜ್ ಬಳಸಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಬೆಂಜ್ ಲಾರಿ ಪತ್ತೆಯಾಗಿದೆ. ಅದನ್ನು ಬೃಹತ್ ಬಾರ್ಜ ಬಳಸಿ ಮೇಲೆತ್ತಲಾಗುತ್ತಿದೆ. ಜತೆಗೆ ಅರ್ಜುನ್ ಅವರ ಮೃತದೇಹ ಕೂಡ ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಅವರು ತಮ್ಮ ಫೆಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.