For the best experience, open
https://m.bcsuddi.com
on your mobile browser.
Advertisement

ಶಾಸಕ ಮುನಿರತ್ನಗೆ ಸಿಕ್ಕಿತು ಜಾಮೀನು ಭಾಗ್ಯ

04:58 PM Oct 15, 2024 IST | BC Suddi
ಶಾಸಕ ಮುನಿರತ್ನಗೆ ಸಿಕ್ಕಿತು ಜಾಮೀನು ಭಾಗ್ಯ
Advertisement

ಬೆಂಗಳೂರು :ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅತ್ಯಾಚಾರ ಪ್ರಕರಣದಲ್ಲಿ ಬಂಧಿಯಾಗಿದ್ದು ಇಂದು ನ್ಯಾಯಾಲಯ ಶಾಸಕರಿಗೆ ಜಾಮೀನು ನೀಡಿದೆ.

ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಜಾಮೀನು ಮಂಜೂರು ಮಾಡಿದ್ದು ಈ ಮೂಲಕ ಒಂದು ತಿಂಗಳ ಬಳಿಕ ಶಾಸಕ ಮುನಿರತ್ನಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಸುಮಾರು 40 ವರ್ಷದ ಮಹಿಳೆಯ ದೂರಿನ ಆಧಾರದ ಮೇಲೆ ಕಗ್ಗಲೀಪುರ ಠಾಣೆಯಲ್ಲಿ ಮುನಿರತ್ನ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿದ್ದ ಬಿಜೆಪಿಯಲ್ಲೂ ಸಕ್ರಿಯವಾಗಿದ್ದ ರಾಜರಾಜೇಶ್ವರಿ ನಗರದ ಮಹಿಳೆಯೇ ದೂರು ನೀಡಿದ್ದರು. ಈ ಕಾರನದಿಂದಾಗಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿತ್ತು.

Advertisement

Author Image

Advertisement