ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ವಿಧಾನ ಪರಿಷತ್ ತನ್ನ ಗಾಂಭೀರ್ಯ ಕಳೆದುಕೊಂಡಿದೆ': ವಾಟಾಳ್ ನಾಗರಾಜ್

11:15 AM May 25, 2024 IST | Bcsuddi
Advertisement

ಮಂಡ್ಯ: ಇತ್ತೀಚಿನ ದಿನಗಳಲ್ಲಿ ವಿಧಾನ ಪರಿಷತ್ ನ ಗಾಂಭೀರ್ಯ ಕಳೆದುಕೊಂಡಿದೆ ಎಂದು ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವಾಟಾಳ್ ನಾಗರಾಜ್ ಮಂಡ್ಯದಲ್ಲಿಂದು ತಿಳಿಸಿದ್ದಾರೆ.

Advertisement

ಮೇಲ್ಮನೆ ಬುದ್ಧಿವಂತರ ಹಾಗೂ ಮಹನೀಯರ ಸದನವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ತನ್ನ ಸ್ಥಾನ ಕಳೆದುಕೊಳ್ಳುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಪ್ರಾಮಾಣಿಕರನ್ನು ಹಾಗೂ ಆರ್ಹರನ್ನು ಆಯ್ಕೆ ಮಾಡಬೇಕಿದೆ. ಶಿಕ್ಷಕರು ಸಮಾಜವನ್ನು ತಿದ್ದುವವರಾಗಿದ್ದು, ಪಕ್ಷಾತೀತರಾದವರು, ಶಿಕ್ಷಕರ ಸಂಕಷ್ಟಕ್ಕೆ ಸ್ಪಂದಿಸುವ ಸಮರ್ಥರು ವಿಧಾನ ಪರಿಷತ್ತಿಗೆ ಆಯ್ಕೆಯಾಗಲಿ ಎಂದು ಹೇಳಿದರು. ಕಾವೇರಿ ವಿಚಾರವಾಗಿ ಎಲ್ಲ ಕಾಲದಲ್ಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ, ಸರ್ಕಾರ ಕಾವೇರಿ ನೀರಿನ ವಿಚಾರವಾಗಿ ರಾಜಕೀಯ ಮಾಡದಂತೆ ಗಮನ ವಹಿಸಿಬೇಕಿದೆ, ರಾಜಕೀಯದಲ್ಲಿರುವ ಕುಟುಂಬ ರಾಜಕಾರಣ ತೊಲಗಬೇಕಿದ್ದು, ಜನ ಸೇವೆ ಮಾಡುವ ಪ್ರತಿಯೊಬ್ಬರು ನಾಯಕರಾಗಿ ಹೊರಹೊಮ್ಮಬೇಕು ಈ ಚುನಾವಣೆಯಲ್ಲಿ ತಮ್ಮ ಸೇವೆ ಹಾಗೂ ಪ್ರಮಾಣಿಕತೆಯನ್ನು ಗುರುತಿಸಿ ಮತ ನೀಡಬೇಕೆಂದು ಮನವಿ ಮಾಡಿದರು.

Advertisement
Next Article