ವಾಲ್ಮೀಕಿ ಹಗರಣ: ಕೋರ್ಟ್ ನಲ್ಲಿ ಇಂದು ನಾಗೇಂದ್ರ ಭವಿಷ್ಯ ನಿರ್ಧಾರ
11:49 AM Jul 22, 2024 IST | Bcsuddi
Advertisement
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ ಬಂಧನದಲ್ಲಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ.
ಈ ಹಿನ್ನೆಲೆಯಲ್ಲಿ ಇಂದು ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜನಪ್ರತಿನಿಧಿಗಳ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ನಾಗೇಂದ್ರ ಅವರನ್ನು ಜು.18 ರಂದು ಕೋರ್ಟ್ ಹಾಜರುಪಡಿಸಿದ್ದ ಇ.ಡಿ ಜು.22 ರವರೆಗೆ ವಶಕ್ಕೆ ಪಡೆದಿತ್ತು.
Advertisement
ಇನ್ನು ನಾಗೇಂದ್ರ ಅವರು ಇಡಿ ಕಸ್ಟಡಿಯಲ್ಲಿ ಇರುವಾಗಲೇ ಅವರ ಪತ್ನಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿ ಅಕ್ರಮದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ. ಅಕ್ರಮದ ಬಗ್ಗೆ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ನಾಗೇಂದ್ರ ಉತ್ತರಿಸದ ಕಾರಣ ಮತ್ತೊಮ್ಮೆ ಹೆಚ್ಚಿನ ವಿಚಾರಣೆಗೆ ಇಡಿ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ