ವಚನ : -ವೀರಸಂಗಯ್ಯ
07:12 AM Nov 17, 2023 IST | Bcsuddi
Advertisement
ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
Advertisement
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.
ವಚನ: :
ತನ್ನ ತಾನರಿವುದೆ ಉತ್ತಮ ಶರೀರ.
ಇನ್ನು ಹೇಳಿದರೆ ಕೇಳುವದೇ ಮಧ್ಯಮ ಶರೀರ.
ಮನ್ನಿಸದೆ ಅಗ್ನಿಗೆ ಬೀಳುವುದೆ ಕನಿಷ್ಠ ಶರೀರ.
ಹೊನ್ನಿನ ಬಣ್ಣಕೆ ಇವು ಮೂರು ಬಣ್ಣ ಹೆಚ್ಚು.
ಅನ್ನವ ದಂಡಿಸಿಕೊಂಬುದೆ ಅಧಮ ಜಾತಿ,
ಮನ್ನಣೆಯಿಂದ ನೀಡಿದ್ದ ಕೊಂಬುದೆ ಮಧ್ಯಮ ಜಾತಿ,
ಇನ್ನು ಯಾರನು ಬೇಡದೆ ಕೃಷಿಯ ಮಾಡಿ ಉಂಬುದೆ ಅಪೂರ್ವಜಾತಿ.
ಹನ್ನೊಂದು ಪರಿ ಉದ್ಯೋಗ ಉಂಟು.
ಕರ್ಮಧರ್ಮವ ಸೋದಿಸಬಲ್ಲರೆ ಅನ್ಯಾಯಹತ್ತರ
ಮೇಲು ಧರ್ಮಕಾಯಕ ಕಾಣಾಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
-ವೀರಸಂಗಯ್ಯ