ವಚನ- --ನಂಜುಂಡಶಿವ
07:34 AM Jul 03, 2024 IST
|
Bcsuddi
Advertisement
ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
Advertisement
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಅಭಿಪ್ರಾಯ ಹಂಚಿಕೊಳ್ಳಿ.
ಗುರುಲಿಂಗಜಂಗಮ ತ್ರಿವಿಧಪ್ರಸಾದವ
ಕೊಂಡೆವೆಂದುಲಿವ ಅಜ್ಞಾನಿಗಳು ನೀವು ಕೇಳಿರೆ.
ಗುರುಪ್ರಸಾದವ ಕೊಂಡಲ್ಲಿ ಮಲತ್ರಯದೋಷವಳಿಯಬೇಕು.
ಲಿಂಗಪ್ರಸಾದವ ಕೊಂಡಲ್ಲಿ ಇಂದ್ರಿಯ ವಿಷಯಸೂತಕವಳಿಯಬೇಕು.
ಜಂಗಮಪ್ರಸಾದವ ಕೊಂಡಲ್ಲಿ ಸರ್ವಸಂಕಲ್ಪ ಸಂಶಯವಳಿಯಬೇಕು.
ಇಂತೀ ತ್ರಿದೋಷವಳಿಯದೆ ಆದ್ಯರ ವಚನವ ಕಲಿತು,
ಮನಬಂದಂತೆ ಉಲಿವುತಿಪ್ಪ ದುಶ್ಶೀಲರನೊಲ್ಲ ,ನಮ್ಮ ಪರಮಗುರು ನಂಜುಂಡಶಿವನು.
-ನಂಜುಂಡಶಿವ
Next Article