ವಚನ: -- -ಕೋಲ ಶಾಂತಯ್ಯ .!
07:06 AM Oct 04, 2024 IST
|
BC Suddi
Advertisement
Advertisement
ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಅಭಿಪ್ರಾಯ ಹಂಚಿಕೊಳ್ಳಿ.
ವಚನ:
ಬಿಸಿಲ ಮುಂದಣ ಮಂಜಿನಂತಾಯಿತ್ತು.
ದಿಟದ ಮುಂದಣ ಸಟೆಯಂತಾಯಿತ್ತು.
ಪುಣ್ಯದ ಮುಂದಣ ಪಾಪದಂತಾಯಿತ್ತು.
ಯೋಗಿಯ ಮುಂದಣ ಸಂಸಾರದಂತಾಯಿತ್ತು.
ಧೀರನ ಮುಂದಣ ಹೇಡಿಯಂತಾಯಿತ್ತು.
ಉರಗನ ಮುಂದಣ ಭೇಕನಂತಾಯಿತ್ತು.
ಹರಿಯ ಮುಂದಣ ಕರಿಯಂತಾಯಿತ್ತು.
ವಿವೇಕದ ಮುಂದಣ ದುಃಖದಂತಾಯಿತ್ತು.
ಪುಣ್ಯಾರಣ್ಯದಹನ ಭೀಮೇಶ್ವರನೆಂಬ
ಸದ್ಗುರು ಕಾರುಣ್ಯವಾಗಲೊಡನೆಎನ್ನ ಸುತ್ತಿಹ ಪ್ರಪಂಚು ಸರ್ವವೂ ಓಡಿದವಯ್ಯಾ!
-ಕೋಲ ಶಾಂತಯ್ಯ
Next Article