ಲೋಕಸಭೆ ಚುನಾವಣೆ: ಇಬ್ಬರು ಬೇಜವಾಬ್ದಾರಿ ಶಿಕ್ಷಕಿಯರು ಅಮಾನತ್.!
08:18 AM May 03, 2024 IST | Bcsuddi
Advertisement
ವಿಜಯನಗರ: ಜಿಲ್ಲೆಯಲ್ಲಿ ಲೋಕಸಭೆ ಚುನಾವಣಾ ಕಾರ್ಯ ನಿರ್ವಹಿಸಲು ನಿರಾಕರಿಸಿ ಬೇಜವಾಬ್ದಾರಿ ವರ್ತನೆ ತೋರಿದ ಆರೋಪದ ಮೇಲೆ ಇಬ್ಬರು ಶಿಕ್ಷಕಿಯರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಇಬ್ಬರು ಬಿಎಲ್ಓಗಳನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಗುರುವಾರ ಆದೇಶ ಹೊರಡಿಸಿದ್ದಾರೆ.
Advertisement
ಗುಡೆಕೋಟೆ ಹೋಬಳಿಯ ಮತಗಟ್ಟೆ ಸಂಖ್ಯೆ 120ರ ಅಧಿಕಾರಿ ಮಮತಾ ಮತ್ತು ಮತಗಟ್ಟೆ 119ರ ಅಧಿಕಾರಿ ಸುನಂದಾ ಅಮಾನತುಗೊಂಡ ಸಹಶಿಕ್ಷಕರಾಗಿದ್ದಾರೆ. ಇಲಾಖಾ ವಿಚಾರಣೆ ಕಾಯ್ದಿರಿಸಿ ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.