For the best experience, open
https://m.bcsuddi.com
on your mobile browser.
Advertisement

ರೈತರ ವಿವಾಹಕ್ಕೆ ಬಂತು 'ಜೀವನ ಸಂಗಮ' ಪೋರ್ಟಲ್‌!

01:15 PM Jul 06, 2024 IST | Bcsuddi
ರೈತರ ವಿವಾಹಕ್ಕೆ ಬಂತು  ಜೀವನ ಸಂಗಮ  ಪೋರ್ಟಲ್‌
Advertisement

ಕಾರವಾರ ಜಿಲ್ಲಾಡಳಿತದಿಂದ ರೈತ ಯುವಕರು, ವಿಕಲಚೇತನರು ಹಾಗೂ ಎಚ್‌.ಐ.ವಿ ಪೀಡಿತರಿಗೆ ವಿವಾಹವಾಗಲು ಮೊದಲ ಬಾರಿಗೆ ಸೂಕ್ತ ವೇದಿಕೆ ಕಲ್ಪಿಸಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲಾಡಳಿತದ ವೆಬ್‌ ಸೈಟ್‌ https://uttarakannada.nic.in/ ನಲ್ಲಿ ಜೀವನ ಸಂಗಮ ಎಂಬ ಪೋರ್ಟಲ್‌ ಆರಂಭಿಸಲಾಗಿದೆ.
ಜಿಲ್ಲೆಯಲ್ಲಿನ ಯುವ ರೈತರು, ವಿಕಲಚೇತನರು, ವಿಧವೆಯರಿಗೆ ಸೂಕ್ತ ಸಂಗಾತಿ ಆಯ್ಕೆಯನ್ನು ಪರಿಚಯಿಸಲು ಹಾಗೂ ಎಚ್‌.ಐ.ವಿ. ಪೀಡಿತ ವ್ಯಕ್ತಿಗಳಿಗೆ ಅದೇ ಸಮುದಾಯದ ವ್ಯಕ್ತಿಯ ನಡುವೆ ವೈವಾಹಿಕ
ಸಂಬಂಧಗಳನ್ನು ಬೆಸೆಯಲು ಸೂಕ್ತ ವೇದಿಕೆಯಾಗಿದೆ.

Advertisement
Author Image

Advertisement