ರೈತರಿಗೆ ಸಿಹಿ ಸುದ್ದಿ.! ಮತ್ತೆ ಪ್ರಾರಂಭ ಯಶಸ್ವಿನಿ ಯೋಜನೆ.!
08:04 AM Sep 15, 2024 IST
|
BC Suddi
Advertisement
ತುಮಕೂರು : ಸಹಕಾರ ಸಚಿವ ಕೆ.ಎನ್. ರಾಜಣ್ಣಅವರು ರಾಜ್ಯದಲ್ಲಿ ಮತ್ತೆ ಯಶಸ್ವಿನಿ ಯೋಜನೆ ಮರು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
Advertisement
ಎಸ್.ಎಂ.ಕೃಷ್ಣ ಕಾಲದಲ್ಲಿ ಯಶಸ್ವಿನಿ ಯೋಜನೆ ಜಾರಿಗೆ ತರಲಾಗಿತ್ತು. ಯಡಿಯೂರಪ್ಪ ಮತ್ತೆ ಜಾರಿ ಮಾಡುತ್ತೇವೆ ಎಂದಿದ್ದರು. ಆದರೂ ಯೋಜನೆ ಜಾರಿಯಾಗಲಿಲ್ಲ. ಈಗ ಯಶಸ್ವಿನಿ ಯೋಜನೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.
ಇನ್ನು ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿದ್ದು, ಏರಿಕೆ ಹಣ ರಾಜ್ಯ ಸರ್ಕಾರಕ್ಕೆ ಲಾಭವಲ್ಲ. ಬದಲಿಗೆ ರೈತರಿಗೆ ಲಾಭ ಸಿಗಲಿದೆ. ಒಂದು ಬಾಟಲಿ ನೀರಿಗೆ ಕೊಡುವ ದರವನ್ನು ಹಾಲಿಗೆ ಕೊಡಿ ಎಂದರೆ ವಿರೋಧ ಬರುತ್ತಿದೆ. ಇದು ಬಹಳ ವಿಪರ್ಯಾಸ, ರೈತರ ಹಣ ಕೊಡುತ್ತೇವೆಂಬುದನ್ನು ಎಲ್ಲರೂ ಬೆಂಬಲಿಸಬೇಕು ಎಂದು ತಿಳಿಸಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
Next Article