For the best experience, open
https://m.bcsuddi.com
on your mobile browser.
Advertisement

ರೈತನಿಗೆ ಅವಮಾನಿಸಿದ್ದ ಜಿಟಿ ಮಾಲ್‌ 7 ದಿನ ಬಂದ್‌..!

02:29 PM Jul 18, 2024 IST | Bcsuddi
ರೈತನಿಗೆ ಅವಮಾನಿಸಿದ್ದ ಜಿಟಿ ಮಾಲ್‌ 7 ದಿನ ಬಂದ್‌
Advertisement

ಪಂಚೆ ಧರಿಸಿ ಬಂದ ಹಾವೇರಿಯ ರೈತನಿಗೆ ಪ್ರವೇಶ ನಿರಾಕರಿಸಿದ್ದ ಬೆಂಗಳೂರಿನ ಜಿಟಿ ವರ್ಲ್ಡ್‌ ಮಾಲ್‌ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿರುವ ಸರ್ಕಾರ ಮಾಲ್‌ನ್ನು 7 ದಿನ ಮುಚ್ಚಲು ನಿರ್ಧರಿಸಿದೆ.

ಮಾಲ್‌ ಮುಚ್ಚಲು ಸೂಚಿಸಿರುವುದಾಗಿ ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್‌ ಕೂಡ ಘೋಷಿಸಿದ್ದಾರೆ. ಧೋತಿ ಉಟ್ಟು ಬಂದ ರೈತನಿಗೆ ನಿನ್ನೆ ಜಿ.ಟಿ ಮಾಲ್‌ ಪ್ರವೇಶ ನಿರಾಕರಿಸಿದ್ದು, ಮಾಲ್‌ನ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಇದೀಗ ಮಾಲ್‌ನ್ನು ತಾತ್ಕಾಲಿಕವಾಗಿ ಕ್ಲೋಸ್‌ ಮಾಡುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.

Advertisement

Author Image

Advertisement