ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರೇಣುಕಾಸ್ವಾಮಿ ಕೊಲೆ ಕೇಸ್‌ : ಮತ್ತಿಬ್ಬರು ಆರೋಪಿಗಳ ಅರೆಸ್ಟ್‌ - ಕೊಲೆಗೂ ಇವರಿಗೂ ಏನು ನಂಟು ಗೊತ್ತಾ?

06:49 PM Jun 14, 2024 IST | Bcsuddi
Advertisement

ಬೆಂಗಳೂರು: ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಕೊಲೆ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಇದೀಗ ಬಂಧನವಾಗಿರುವ ಆರೋಪಿಗಳನ್ನು ಪುನೀತ್ ಮತ್ತು ಹೇಮಂತ್ ಎಂದು ಗುರುತಿಸಲಾಗಿದೆ. ನಿನ್ನೆ (ಗುರುವಾರ) ಸರೆಂಡರ್ ಆಗಿದ್ದ ರವಿ ಸೇರಿ ಮೂವರನ್ನೂ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸು ಸಿದ್ಧತೆ ನಡೆಸಿದ್ದಾರೆ. ಕೊಲೆ ಕೇಸ್‌ಗೂ ಇವರಿಗೂ ಏನು ನಂಟು ಅನ್ನೋದನ್ನ ನೋಡುವುದಾದರೆ...

Advertisement

ರವಿ : ಇಟಿಯೋಸ್ ಕಾರು (ಮೃತದೇಹ ಸಾಗಿಸಿದ ಕಾರು) ಚಾಲಕ.

ಹೇಮಂತ್ : ಸ್ಕಾರ್ಪಿಯೋ ಕಾರನ್ನು ರಕ್ತದ ಕಲೆಗಳು ಹೋಗುವಂತೆ ವಾಶ್ ಮಾಡಿಸಿಕೊಂಡು ಬಂದಿದ್ದವ.

ಪುನೀತ್: ಕೊಲೆ ಮಾಡಿದ ಬಳಿಕ ಮೃತ ದೇಹ ಸಾಗಿಸಲು ಕಾರು ನೀಡಿದ್ದವನು.

Advertisement
Next Article