ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರೇಣುಕಾಸ್ವಾಮಿ ಕೊಲೆ ಕೇಸ್ - ಬಂಧನವಾದ ಆರೋಪಿಗಳ ಹೆಸರು ಬಹಿರಂಗ..!

01:53 PM Jun 11, 2024 IST | Bcsuddi
Advertisement

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 10 ಜನ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Advertisement

ಇನ್ನು, ದರ್ಶನ್ ಬಳಿಕ ಉಳಿದ 9 ಜನ ಆರೋಪಿಗಳು ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಹೌದು, ಆ ಒಂಬತ್ತು ಜನ ಆರೋಪಿಗಳು ಯಾರು ಎಂಬುದು ಮಾಹಿತಿ ಲಭ್ಯವಾಗಿದೆ. ಅವರು ಯಾರು ಎಂಬ ಮಾಹಿತಿ ಕೆಳಗಿನಂತಿದೆ.

1.ಪವನ್, ಈತ ನಟ ದರ್ಶನ್ ಆಪ್ತನ ಹಾಗೂ ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಹೇಳಿದ್ದವನು ಎನ್ನಲಾಗಿದೆ. ಅಲ್ಲದೇ, ನಟ ದರ್ಶನ್ ಆಪ್ತೆ ಪವಿತ್ರಾಗೌಡಗೂ ಆಪ್ತ ಎನ್ನಲಾಗಿದೆ.

2. ಪ್ರದೋಶ್, ಈತ ಹೋಟೆಲ್ ಉದ್ಯಮಿಯಾಗಿದ್ದು, ನಟ ದರ್ಶನ್ ಆಪ್ತ ಎನ್ನಲಾಗಿದೆ.

3. ನಂದೀಶ್, ಈತ ಕೂಡಾ ಹಲ್ಲೆ ಮಾಡಿದ ಮುಖ್ಯ ವ್ಯಕ್ತಿಯಾಗಿದ್ದಾನೆ. ಅಷ್ಟೇ ಅಲ್ಲದೇ, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಕೊಂಡು ಕರೆ ತಂದವನು ಎನ್ನಲಾಗಿದೆ.

4. ಕೇಶವಮೂರ್ತಿ, ಪ್ರದೂಶ್ ಗೆಳೆಯ ಹಾಗೂ ಉದ್ಯಮಿಯಾಗಿದ್ದಾನೆ.

5. ರಾಘವೇಂದ್ರ, ಈತ ನಟ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನಾಗಿದ್ದಾನೆ.

6. ಲಕ್ಷ್ಮಣ್, ದರ್ಶನ್ ಕಾರು ಚಾಲಕನಾಗಿದ್ದಾನೆ.

7. ದೀಪಕ್, ದರ್ಶನ್ ಫ್ಯಾನ್ ಅಸೋಷಿಯನ್ ಮೆಂಬರ್ ಹಾಗೂ ಆಪ್ತನಾಗಿದ್ದಾನೆ.

8. ಕಾರ್ತಿಕ್, ದರ್ಶನ್ ಫ್ಯಾನ್ ಅಸೋಷಿಯನ್ ಮೆಂಬರ್ ಹಾಗೂ ಆಪ್ತನಾಗಿದ್ದಾನೆ.

9. ವಿನಯ್, ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ವಿನಯ್ ಒಡೆತನದ ಶೆಡ್‌ನಲ್ಲಿ ಇಡಲಾಗಿತ್ತು. ಸ್ಟೋನಿ ಬ್ರೋಕ್ ಶೆಡ್‌ನ ಮಾಲೀಕನಾಗಿದ್ದಾನೆ.

Advertisement
Next Article