For the best experience, open
https://m.bcsuddi.com
on your mobile browser.
Advertisement

 ರೇಣುಕಾಸ್ವಾಮಿ ಕುಟುಂಬಕ್ಕೆ ನೆರವಾಗೋ ಮನಸ್ಸು ಮಾಡಿದ್ರಾ ದರ್ಶನ್..?

09:57 AM Jul 18, 2024 IST | Bcsuddi
 ರೇಣುಕಾಸ್ವಾಮಿ ಕುಟುಂಬಕ್ಕೆ ನೆರವಾಗೋ ಮನಸ್ಸು ಮಾಡಿದ್ರಾ ದರ್ಶನ್
Advertisement

ಬೆಂಗಳೂರು : ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡುವ ಬಗ್ಗೆ ದರ್ಶನ್ ಮಾತನಾಡಿದ್ದಾರಂತೆ.

ರೇಣುಕಾಸ್ವಾಮಿ ಪತ್ನಿ ಹಾಗು ಮಗುವಿಗೆ ಸಹಾಯ ಮಾಡುವ ಚಿಂತನೆ ನಡೆಸಿದ್ದಾರಂತೆ. ಕೇವಲ ಪತ್ನಿ ,ಮಗು ಅಲ್ಲದೆ ಪೋಷಕರಿಗೆ ಪ್ರತ್ಯೇಕವಾಗಿ ಸಹಾಯ ಮಾಡುವ ಬಗ್ಗೆ ಸಹ ದರ್ಶನ್ ಆಲೋಚನೆ ಮಾಡಿದ್ದಾರಂತೆ.

ಜೈಲಲ್ಲಿ ಈ ಬಗ್ಗೆ ಕುಟುಂಬಸ್ಥರು ಕೂಡ ದರ್ಶನ್ ಬಳಿ ಪ್ರಸ್ತಾಪ ಮಾಡಿದ್ದು, ದರ್ಶನ್ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರಂತೆ. ಜೈಲಿಂದ ಹೊರಬಂದ ಬಳಿಕ ಮೊದಲ ಪ್ರಾಶಸ್ತ್ಯದಲ್ಲಿ ಈ ಕೆಲಸ ಮಾಡುವಂತೆ ದರ್ಶನ್ ಗೆ ಕುಟುಂಬಸ್ಥರು ಹೇಳಿದ್ದಾರೆ.

Advertisement

ಇದಕ್ಕೆ ಒಪ್ಪಿಕೊಂಡಿರೋ ದರ್ಶನ್ ಸಹಾಯ ಮಾಡೋದಾಗಿ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. ಅಭಿಮಾನಿಗಳ ಜೊತೆ ಹೋಗಿ ಸಹಾಯ ಮಾಡೋದಾಗಿ ದರ್ಶನ್ ಕುಟುಂಬಸ್ಥರಿಗೆ ಹೇಳಿದ್ದಾರಂತೆ. ಆದ್ರೆ ದರ್ಶನ್ ಸಹಾಯ ಮಾಡಲು ಬಂದ್ರೆ ರೇಣುಕಾಸ್ವಾಮಿ ಕುಟುಂಬ ಒಪ್ಪಿಕೊಳ್ಳುತ್ತಾ ಅನ್ನೋದು ಗೊತ್ತಿಲ್ಲ.

Author Image

Advertisement