ರೇಣುಕಸ್ವಾಮಿ ಕೊಲೆ ಪ್ರಕರಣ ತಡರಾತ್ರಿಯಲ್ಲಿ ಸ್ಥಳ ಮಹಜರು.!
07:39 AM Jun 14, 2024 IST
|
Bcsuddi
Advertisement
Advertisement
ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ಆರೋಪಿಗಳ ಜೊತೆ ಗುರುವಾರ ತಡರಾತ್ರಿ 2 ಗಂಟೆ ಸಮಯದಲ್ಲಿ ನಗರದ ವಿವಿಧೆಡೆ ಸ್ಥಳ ಮಹಜರು ನಡೆಸಿದ್ದಾರೆ.
ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ದ 4ನೇ ಆರೋಪಿ ರಾಘವೇಂದ್ರ ಹಾಗೂ ಇತರರ ಜೊತೆ ಪರಿಶೀಲನೆ ನಡೆಸಿದ್ದಾರೆ. ರೇಣುಕಸ್ವಾಮಿ ಕೆಲಸ ಮಾಡುತ್ತಿದ್ದ ಐಯುಡಿಪಿ ಲೇಔಟ್ ನ ಖಾಸಗಿ ಫಾರ್ಮಸಿ, ಆತ ಬೈಕ್ ನಿಲ್ಲಿಸಿದ್ದ ಪೆಟ್ರೋಲ್ ಬಂಕ್ ಪ್ರದೇಶ, ರೇಣುಕಸ್ವಾಮಿಯನ್ನು ಕಾರಿಗೆ ಹತ್ತಿಸಿಕೊಂಡ ಚಳ್ಳಕೆರೆ ಗೇಟ್ ಹಾಗೂ ತುರುವನೂರು ರಸ್ತೆಯಲ್ಲಿರುವ ರೇಣುಕಸ್ವಾಮಿ ನಿವಾಸದ ಬಳಿ ಪೊಲೀಸರು ಮಹಜರು ನಡೆಸಿದ್ದಾರೆ.
Next Article