For the best experience, open
https://m.bcsuddi.com
on your mobile browser.
Advertisement

ರಾಜ್ಯ ಸರ್ಕಾರಕ್ಕೂ ಬಾಂಬ್ ಬೆದರಿಕೆ ಕರೆ

03:57 PM Mar 05, 2024 IST | Bcsuddi
ರಾಜ್ಯ ಸರ್ಕಾರಕ್ಕೂ ಬಾಂಬ್ ಬೆದರಿಕೆ ಕರೆ
Advertisement

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಕಚೇರಿಗಳನ್ನು ಶನಿವಾರ ಮಧ್ಯಾಹ್ನ 2:48 ಗಂಟೆಗೆ ಬ್ಲಾಸ್ಟ್ ಮಾಡುವುದಾಗಿ ದುಷ್ಕರ್ಮಿಗಳು ಇ-ಮೇಲ್ ಮಾಡಿದ್ದಾರೆ. ಶಾಹೀದ್ ಖಾನ್ ಹೆಸರಿನಲ್ಲಿ ಸರ್ಕಾರಕ್ಕೆ ಬಾಂಬ್ ಬ್ಲ್ಯಾಸ್ಟ್ ಮೇಲ್ ‌ಬಂದಿದ್ದು, ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಮೇಲ್ ಮಾಡಿದ್ದಾರೆ. ಈ ಬಗ್ಗೆ ಖುದ್ದು ಪೊಲೀಸರೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾರ್ಚ್ 4ರಂದು ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ. ಬಸ್‌, ರೈಲು, ದೇವಸ್ಥಾನ, ಹೋಟೆಲ್‌ಗಳಲ್ಲಿ ಬಾಂಬ್ ಇಡುತ್ತೇವೆ ಅಂತ ಬೆದರಿಕೆ ಹಾಕ್ತಿದ್ದ ಕಿಡಿಗೇಡಿಗಳು ಸದ್ಯ ಸರ್ಕಾರಿ ಕಚೇರಿಗೆ ಬಾಂಬ್‌ ಬೆದರಿಕೆ ಹಾಕಿದ್ದಾರೆ.

Author Image

Advertisement