ರಾಜ್ಯ ಸರಕಾರದಿಂದ ರೈತರಿಗೆ ಸಿಹಿ ಸುದ್ದಿ.!
07:36 AM Jun 26, 2024 IST
|
Bcsuddi
Advertisement
Advertisement
ಕಲಬುರಗಿ : ಬೆಳೆ ನಷ್ಟದಿಂದ ಕಂಗಾಲಾಗಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ರೈತರ ಜೀವನೋಪಾಯ ನಷ್ಟ ಭರಿಸಲು ರೈತರಿಗೆ ತಲಾ 3,000 ರೂ. ಪರಿಹಾರ ವಿತರಣೆ ಮಾಡಲಾಗುವುದು ಎಂದು ಕಂದಾಯ ಕೃಷ್ಣಬೈರೇಗೌಡ ಹೇಳಿದ್ದಾರೆ.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರು, ರಾಜ್ಯದಲ್ಲಿ ಬರಗಾಲ ಕಾರಣ ಸಣ್ಣ, ಅತಿ ಸಣ್ಣ ರೈತರು ವಾರ್ಷಿಕ ಬೆಳೆ ನಷ್ಟದಿಂದ ಕಂಗಾಲಾಗಿದ್ದು, ಅವರ ಜೀವನೋಪಾಯ ನಷ್ಟ ಭರಿಸಲು ೧೮ ಲಕ್ಷ ರೈತರಿಗೆ ತಲಾ 3,000 ರೂ. ಪರಿಹಾರ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು 40ಲಕ್ಷ ರೈತರಿಗೆ ಎಸ್ ಡಿಆರ್ ಎಫ್ ನಿಧಿಯಲ್ಲಿ 2,451 ಕೋಟಿ ರೂ.ಗಳ ಬರಗಾಲ ಪರಿಹಾರ ನೀಡಿದ್ದು, ಮುಂದಿನ ಒಂದು ವಾರದಲ್ಲಿ ರೈತರಿಗೆ 3,000 ರೂ. ಪರಿಹಾರ ಹಣ ಖಾತೆಗೆ ಜಮಾ ಆಗಲಿದೆ ಎಂದು ಹೇಳಿದ್ದಾರೆ.
Next Article