For the best experience, open
https://m.bcsuddi.com
on your mobile browser.
Advertisement

ರಾಜ್ಯಪಾಲ ಗೆಹ್ಲೋಟ್, ಡಿಕೆಶಿ ಮುಖಾಮುಖಿ- ಒಟ್ಟಿಗೆ ಊಟ ಉಭಯ ಕುಶಲೋಪರಿ

03:31 PM Aug 28, 2024 IST | BC Suddi
ರಾಜ್ಯಪಾಲ ಗೆಹ್ಲೋಟ್  ಡಿಕೆಶಿ ಮುಖಾಮುಖಿ  ಒಟ್ಟಿಗೆ ಊಟ ಉಭಯ ಕುಶಲೋಪರಿ
Advertisement

ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅನುಮತಿ ನೀಡಿದ್ದರಿಂದ ರಾಜ್ಯಪಾಲರ ನಡೆಯನ್ನು ತೀವ್ರವಾಗಿ ಖಂಡಿಸಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟನೆ ನಡೆಸಿತ್ತು. ಅಲ್ದೇ ಆಗಸ್ಟ್ 31ರಂದು ರಾಜಭವನ ಚಲೋಗೂ ಸಹ ಕಾಂಗ್ರೆಸ್ ಕರೆ ನೀಡಿದೆ. ಇದ್ರ ನಡುವೆ ರಾಜ್ಯಪಾಲರ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್ ಕುಳಿತು ಊಟ ಮಾಡಿ ಉಭಯ ಕುಶಲೋಪರಿ ಚರ್ಚೆಯ ಫೋಟೊ ಸಖತ್ ವೈರಲ್ ಆಗ್ತಿದೆ. ಸಚಿವ ಬೈರತಿ ಸುರೇಶ್ ಅವರ ಪುತ್ರ ಸಂಜಯ್ ಹಾಗೂ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಪುತ್ರಿ ಅಪೂರ್ವ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಪಾಲರು ಹಾಗೂ ಡಿಸಿಎಂ ಒಟ್ಟಿಗೆ  ಕುಳಿತು ಊಟ ಮಾಡಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement

Author Image

Advertisement